ಕರಾವಳಿ

ಜೀರ್ಣ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಕೆಲವು ಸಲಹೆ ಮತ್ತು ಸೂಚನೆಗಳು.

Pinterest LinkedIn Tumblr

ನಾವು ಸೇವಿಸುವ ಆಹಾರ ಸಂಪೂರ್ಣ ಜೀರ್ಣವಾಗಬೇಕು ಆಗ ದೇಹದಲ್ಲಿ ರಕ್ತ ಸಂಚಾರ ಸರಿಯಾದ ಕ್ರಮದಲ್ಲಿ ಆಗಬೇಕು ಜೀವದ ಆಹಾರ ಶಕ್ತಿಯಾಗಿ ಸಂಚಯವಾಗುವುದು ಜೀರ್ಣಕ್ರಿಯೆಯಲ್ಲಿ ತೊಂದರೆಗಳು ಕಂಡುಬಂದರೆ ಅನಾರೋಗ್ಯ ಉಂಟಾಗುವುದು, ಜೀರ್ಣಕ್ರಿಯೆ ಸರಿಯಾಗಿದ್ದರೆ ನಮ್ಮ ಆರೋಗ್ಯ ಸಕ್ರಮವಾಗಿರುವುದು,

ಶುಂಠಿ ಮತ್ತು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಶಕ್ತಿಯನ್ನು ತುರಿದು ರಸವನ್ನು ತೆಗೆದುಕೊಳ್ಳಿ ಅದಕ್ಕೆ ಸಕ್ಕರೆ ಮತ್ತು ಬೇಕಾಗುವಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ, ಶುಂಠಿಯ ಪಾಕವನ್ನು ಬೇಕಾಗುವಷ್ಟು ನೀರಿಗೆ ಸೇರಿಸಿ ಕುಡಿಯುವುದರಿಂದ ಜೀರ್ಣಶಕ್ತಿ ವೃದ್ಧಿಸುವುದು ಶುಂಠಿ ಹಸಿವನ್ನು ಹೆಚ್ಚಿಸುವುದು ಹೀಗಾಗಿ ಶುಂಠಿ ಆರೋಗ್ಯವರ್ಧಕ.

ನಿಂಬೆರಸ ಮತ್ತು ಶುಂಠಿಯ ರಸವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಕರಿಮೆಣಸಿನ ಪುಡಿ, ಕರಿ ಉಪ್ಪು ನಂತರ ಸ್ವಲ್ಪ ಅಡುಗೆ ಉಪ್ಪು ಸೇರಿಸಿ ಎಲ್ಲವನ್ನೂ ಶುಭ್ರವಾದ ಒಂದು ಬಟ್ಟಲಿನಲ್ಲಿ ಹಾಕಿಡಿ, ಹೀಗೆ ಒಂದು ವಾರದ ಕಾಲ ಬಾಟಲನ್ನು ಬಿಸಿನಲ್ಲಿಟ್ಟು ನಂತರ ರಸವನ್ನು ಶೋಧಿಸಿ, ಊಟ ಆದ ಮೇಲೆ ಒಂದು ಚಮಚ ರಸವನ್ನು ನೀರಿನ ಜೊತೆ ಬೆರೆಸಿ ಸೇವಿಸಿ ಜೀರ್ಣಶಕ್ತಿಯು ವೃದ್ಧಿಸುವುದು.

ಜೀರ್ಣಶಕ್ತಿ ಕುಂಠಿತಗೊಳ್ಳಲು ಹೊಟ್ಟೆಯಲ್ಲಿ ಹುಳಗಳು ಸಹ ಕಾರಣವಾಗಬಹುದು, ಹೊಟ್ಟೆಯಲ್ಲಿ ಹುಳಗಳು ಇದ್ದರೆ ದಾಳಿಂಬೆ ಗಿಡದ ಕಷಾಯವನ್ನು ಮಾಡಿ ಕುಡಿಯಿರಿ, ಆಗ ಹುಳಗಳ ಕಾಟ ಕಡಿಮೆಯಾಗುವುದು.

ಮೂಲಂಗಿ ರಸ ಮತ್ತು ಕ್ಯಾರೆಟ್ ರಸವನ್ನು ಸಮಪ್ರಮಾಣದಲ್ಲಿ ಕುಡಿಯಬೇಕು ಆಗ ಹೊಟ್ಟೆಯಲ್ಲಿರುವ ಹುಳಗಳು ನಾಶವಾಗಿ ಜೀರ್ಣಶಕ್ತಿ ವೃದ್ಧಿಸುತ್ತದೆ.

ಸೇಬನ್ನು ಜಜ್ಜಿ ಚೆನ್ನಾಗಿ ಅಗಿದು ತಿಂದರೆ ಹೊಟ್ಟೆಯಲ್ಲಿರುವ ಹುಳಗಳು ನಾಶವಾಗಿ ಜೀರ್ಣಕ್ರಿಯೆ ಸಕ್ರಮಗೊಳ್ಳುವುದು.

ಕೆಲವರು ಅತಿಯಾಗಿ ಆಹಾರವನ್ನು ಸೇವಿಸುವರು ಹಾಗೆ ಒಂದೇ ಸಮನೆ ತಿನ್ನುವುದರಿಂದ ಅಜೀರ್ಣ ಉಂಟಾಗುವುದು, ಅಂತಹ ಸಮಯದಲ್ಲಿ ಉಪವಾಸ ಇರುವುದು ತುಂಬಾ ಒಳ್ಳೆಯದು, ಆಗ ನಮ್ಮ ಜೀರ್ಣಾಂಗಗಳು ಚುರುಕುಗೊಳ್ಳುತ್ತದೆ.

ಬಾಳೆ ಗಿಡದ ಕಾಂಡದ ರಸವನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿ ಹುಳು, ಜೀರ್ಣ ದ ಸಮಸ್ಯೆಗಳು ದೂರವಾಗುತ್ತದೆ, ಬಾಳೆ ಗಿಡದ ಕಂಡದ ರಸದಲ್ಲಿ ಔಷಧೀಯ ಗುಣಗಳು ಉಂಟು.

ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಮ್ಲದಿಂದ ಉಂಟಾಗುವ ರೋಗಗಳನ್ನು ದೂರ ಮಾಡಲು ಬೂದುಗುಂಬಳಕಾಯಿಯ ರಸ ತುಂಬಾ ಒಳ್ಳೆಯದು, ಬೂದುಗುಂಬಳ ರಸಕ್ಕೆ ಸ್ವಲ್ಪ ನೀರನ್ನು ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಉದರ ರೋಗಗಳು ದೂರವಾಗುತ್ತವೆ.

ಗಮನಿಸಿ: ಹೊಟ್ಟೆಯಲ್ಲಿ ಹುಳುಗಳು ಇದ್ದರೆ ಅಜೀರ್ಣವಾಗುವ ಸಂಭವ ಉಂಟು ಅಜೀರ್ಣದಿಂದ ದೇಹದಲ್ಲಿ ಆಲಸ್ಯ ಅಶಕ್ತತೆ ಉಂಟಾಗುತ್ತದೆ, ಶುಂಠಿ ಬೆಳ್ಳುಳ್ಳಿ ಮುಂತಾದ ಸಾಂಬಾರ ಪದಾರ್ಥಗಳಲ್ಲಿ ಇರುವ ಔಷಧೀಯ ಗುಣಗಳಿಂದ ಜೀರ್ಣ ಶಕ್ತಿಯನ್ನು ಹೆಚ್ಚಿಸಬಹುದು.

ಕೊತ್ತಂಬರಿ 12 ಗ್ರಾಂ, ಜೀರಿಗೆ 12 ಗ್ರಾಂ, ಕಾಳ ಮೆಣಸು 3 ಗ್ರಾಂ, ಪುದಿನಾ 3 ಗ್ರಾಂ, ಸೈಂಧಲವಣ 3 ಗ್ರಾಂ, ಸಣ್ಣ ದ್ರಾಕ್ಷಿ 12 ಗ್ರಾಂ, ಇದೆಲ್ಲವನ್ನು ನುಣ‍್ಣಗೆ ಅರೆದು ಊಟದಲ್ಲಿ ಉಪಯೋಗಿಸುವುದರಿಂದ ಅರುಚಿಯು ನಿವಾರಣೆಯಾಗುತ್ತದೆ.
ಎಲ್ಲ ರೋಗಿಗಳು ಊಟದಲ್ಲಿ ಈ ಚಟ್ನಿಯನ್ನು ಬಳಸಬಹುದು.
ಮೆಣಸು, ಕೊತ್ತಂಬರಿ, ಏಲಕ್ಕಿಗಳನ್ನು ತೂಕದಲ್ಲಿ ಸಮಭಾಗ ಚೂರ್ಣಿಸಿಟ್ಟುಕೊಂಡು ಈ ಚೂರ್ಣವನ್ನು ಹೊತ್ತಿಗೆ 1.5 ಗ್ರಾಂ ನಂತೆ ಸಕ್ಕರೆ, ತುಪ್ಪದೊಡನೆ ನಿತ್ಯ ಎರಡು ಹೊತ್ತು ಒಂದರಿಂದ ಎರಡು ವಾರ ಸೇವಿಸುವುದರಿಂದ ಅರುಚಿ ನಿವಾರಣೆಯಾಗುತ್ತದೆ.
ನಿತ್ಯ ಬೆಳಗ್ಗೆ 12 ಗ್ರಾಂ ಕೊತ್ತಂಬರಿಯನ್ನು ಕುಟ್ಟಿ 250 ಮಿ.ಲೀ ನೀರಿನಲ್ಲಿ ಕಷಾಯ ಮಾಡಿ ಅದಕ್ಕೆ ಹಾಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ಅಗ್ನಿ ಮಾಂದ್ಯ, ಅಪಚನ, ಅಜೀರ್ಣ ರೋಗಗಳು ನಿವಾರಣೆಯಾಗುವುದು,
12 ಗ್ರಾಂ ಕೊತ್ತಂಬರಿ, 12 ಗ್ರಾಂ ಪುದಿನಾ, ಇವುಗಳನ್ನು ಜಜ್ಜಿ ಮೇಲಿನಂತೆಯೇ ಕಷಾಯ ಮಾಡಿ ಹಾಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ಅಗ್ನಿ ಮಾಂಧ್ಯ ನಿವಾರಣೆಯಾಗುವುದು.
ಪ್ರತಿ ದಿನ ಬೆಳಗ್ಗೆ 24 ಗ್ರಾಂ ಕೊತ್ತಂಬರಿ ಸೊಪ್ಪಿನ ರಸವನ್ನು ಎರಡರಿಂದ ಮೂರು ವಾರ ಕುಡಿಯುವುದರಿಂದ ಅಜೀರ್ಣ, ಅಪಚನ, ಅಗ್ನಿಮಾಂದ್ಯಗಳು ಪರಿಹಾರವಾಗುತ್ತವೆ.
ಕೊತ್ತಂಬರಿ 120 ಗ್ರಾಂ ಮೆಣಸು, 48 ಗ್ರಾಂ, ಸೈಂದಲವಣ, 48 ಗ್ರಾಂ, ಇವನ್ನು ಕುಟ್ಟಿ ವಸ್ತ್ರ ಗಾಳಿತ ಚೂರ್ಣ ಮಾಡಿಟ್ಟುಕೊಂಡು ನಿತ್ಯ ಊಟದ ನಂತರ 3 ಗ್ರಾಂ ನಂತೆ ಚೂರ್ಣ ಮಾಡಿಟ್ಟುಕೊಂಡು ನಿತ್ಯ ಊಟದ ನಂತರ 3 ಗ್ರಾಂ ನಂತೆ ಚೂರ್ಣ ತಿಂದು ಅದರ ಮೇಲೆ ಬಿಸಿ ಹಾಲನ್ನು ಕುಡಿಯುವುದರಿಂದ ಅಜೀರ್ಣ, ಅಪಚನ, ಅಗ್ನಿಮಾಂದ್ಯ ಪರಿಹಾರ.
ನಿತ್ಯ ಎರಡು ಹೊತ್ತು ಎರಡರಿಂದ ಮೂರು ವಾರ ತನಕ ಸೇವಿಸಬೇಕು.

Comments are closed.