ಕರಾವಳಿ

ಮೇಯರ್ ಭಾಸ್ಕರ್ ಅವರ ಮಾತ್ರಶ್ರೀ ವಿಧಿವಶ : ಶಾಸಕ ಕಾಮಾತ್ ಸಂತಾಪ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕೆ.ಭಾಸ್ಕರ್ ಅವರ ಮಾತೃಶ್ರೀ ಲೀಲಾ ಬಾಯಿ (88) ಅವರು ಮುಡಿಪುನಲ್ಲಿರುವ ತಮ್ಮ ಸ್ವಗೃಹದಲ್ಲಿ ದೈವಾಧೀನರಾಗಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಅಗಲುವಿಕೆಯ ನೋವು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಭಗವಂತ ನೀಡಲಿ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಪ್ರಾರ್ಥಿಸಿದ್ದಾರೆ.

ಮಂಗಳೂರು ಕುಡುಪು ಬೈತುರ್ಲಿ ನಿವಾಸಿ ದಿ| ನಾರಾಯಣ ಬಂಗೇರ ಅವರ ಪತ್ನಿ ಲಿಲಾಬಾಯಿ ಅವರು ಮಾ.3 ರಂದು ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ಮಂಗಳೂರು ಮನಾಪ ಮೇಯರ್ ಕೆ.ಭಾಸ್ಕರ್ ಮತ್ತು ಕೆ. ರತ್ನಾಕರ್ ಸಹಿತ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Comments are closed.