ಕರಾವಳಿ

ಕುಂದಾಪುರ: ಬ್ಯಾಂಕಿಗೆ ಹಣ ಕಟ್ಟಲು ಬಂದಾತನಿಂದ ಹಣ, ಮೊಬೈಲ್ ಕಳವು

Pinterest LinkedIn Tumblr

ಕುಂದಾಪುರ: ಬ್ಯಾಂಕಿಗೆ ಕಟ್ಟಲು ತಂದಿದ್ದ 35 ಸಾವಿರ ರೂ. ನಗದು ಹಣ ಹಾಗೂ ಮೊಬೈಲ್‌ ಫೋನ್‌ ಅನ್ನು ಇಬ್ಬರು ಅಪರಿಚಿತರು ಕಳವುಗೈದ ಘಟನೆ ಕುಂದಾಪುರ ಪುರಸಭೆ ಕಚೇರಿ ಎದುರಿನ ಎಸ್‌ಬಿಐ ಬ್ಯಾಂಕ್‌ ಸಮೀಪ ನಡೆದಿದೆ.

ಜಡ್ಕಲ್‌ ಮುದೂರಿನ ಸಂತೋಷ್‌ ವರಾನ್‌ (32) ಅವರು ಬ್ಯಾಂಕ್‌ ಕಟ್ಟಲು ಹಣ ತಂದಿದ್ದು, ಆದರೆ ಆ ದಿನ ಸರಕಾರಿ ರಜೆ ಇದ್ದುದರಿಂದ ಅಲ್ಲೇ ಸಮೀಪದಲ್ಲಿ ಇದ್ದ ಎಟಿಎಂ ಮೂಲಕ ಹಣ ಪಾವತಿ ಮಾಡಲು ತೆರಳಿದ್ದಾಗ, ಅಲ್ಲೇ ಇದ್ದ ಇಬ್ಬರು ಅಪರಿಚಿತರು ಇವರ ಬಳಿಯಿದ್ದ ಹಣ ಹಾಗೂ ಸುಮಾರು 5 ಸಾವಿರ ರೂ. ಮೌಲ್ಯದ ಮೊಬೈಲ್‌ ಫೋನ್‌ ಅನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.