ಕರಾವಳಿ

ಹರಿದ್ವಾರದಲ್ಲಿ ಸುಧೀಂದ್ರ ತೀರ್ಥ ಸ್ವಾಮೀಜಿಯವರ ತೃತೀಯ ಪುಣ್ಯ ತಿಥಿ ಆಚರಣೆ

Pinterest LinkedIn Tumblr

ಮಂಗಳೂರು : ಪರಮ ಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ತೃತೀಯ ಪುಣ್ಯ ತಿಥಿ ಆಚರಣೆಯು ಹರಿದ್ವಾರದ ವ್ಯಾಸ ಮಂದಿರದಲ್ಲಿರುವ ಶ್ರೀಗಳವರ ವೃನ್ದಾವನ ದಲ್ಲಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ ಹಾಗು ದಿವ್ಯ ಹಸ್ತಗಳಿಂದ ನೆರೆದ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಭಜಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.

ಪ್ರಾತಃ ಕಾಲ ಸಂಸ್ಥಾನದ ಆರಾಧ್ಯ ವೇದವ್ಯಾಸ ದೇವರಿಗೆ ಪಂಚಾಮೃತ , ಪವಮಾನ , ಲಘು ವಿಷ್ಣು ಅಭಿಷೇಕಗಳು ನೆರವೇರಿದವು ಬಳಿಕ ಭಜಕರಿಂದ ವ್ಯಸ್ತುತಿ ನಮಸ್ಕಾರ , ವ್ಯಾಸ ಮಂದಿರದ ದೇವರಿಗೆ ಅಭಿಷೇಕ , ವೃನ್ದಾವನದಲ್ಲಿ ಅಭಿಷೇಕ ವಿಶೇಷ ಪೂಜೆ ಶ್ರೀಗಳವರ ದಿವ್ಯ ಹಸ್ತಗಳಿಂದ ನಡೆಯಿತು .ರಾತ್ರಿ ಸಭಾಕಾರ್ಕ್ರಮದಲ್ಲಿ ಗುರು ಗುಣಗಾನ , ಬಳಿಕ ಶ್ರೀಗಳವರಿಂದ ಆಶೀರ್ವಚನ ನಡೆಯಿತು.

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.