ಕರಾವಳಿ

ದೇಹದಲ್ಲಿನ ನಿಶಕ್ತಿ ನಿವಾರಿಸಿ ಅನೆ ಬಲ ನೀಡಬಲ್ಲ ಪಾನೀಯ

Pinterest LinkedIn Tumblr

ಶೀತ-ಜ್ವರ, ಕೆಮ್ಮು ಶೀತ ಮುಂತಾದ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ತಿನ್ನುವುದರಿಂದ ಕಾಯಿಲೆ ಬೀಳುವುದರಿಂದ ತಪ್ಪಿಸಿಕೊಳ್ಳಬಹುದು.ಸಾಮಾನ್ಯ ಶೀತ-ಜ್ವರ ಸಮಸ್ಯೆಯಿಂದ ಬಳಲುತ್ತಿರುವವರು ಈ ಆಹಾರ ಸೇವಿಸುವುದರಿಂದ ಸುಸ್ತು ಬೇಗನೆ ನಿವಾರಣೆಯಾಗುವುದು.

ಆ್ಯಪಲ್‌, ಕ್ಯಾರೆಟ್‌ ಮತ್ತು ಆರೇಂಜ್: ಈ ಮೂರನ್ನು ಮಿಕ್ಸ್ ಮಾಡಿ ಜ್ಯೂಸ್‌ ಮಾಡಿ ಕುಡಿದರೆ ಸುಸ್ತು ಬೇಗನೆ ಒಂದು ಹತೋಟಿಗೆ ಬಂದು ಬಹುಬೇಗ ನಿವಾರಣೆಯಾಗುವುದು.

ಕಿತ್ತಳೆ ಅಥವಾ ಮೂಸಂಬಿ ಜ್ಯೂಸ್‌: ಇವುಗಳಲ್ಲಿ ವಿಟಮಿನ್‌ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಈ ಆಹಾರ ತುಂಬಾ ಸಹಕಾರಿ.

ಬೀಟ್‌ರೂಟ್‌, ಕ್ಯಾರೆಟ್, ಅರಿಶಿಣ, ನಿಂಬೆರಸ ಜ್ಯೂಸ್‌ :1 ಬೀಟ್‌ ರೂಟ್‌, 3 ಕ್ಯಾರೆಟ್‌, ಒಂದು ಕಿತ್ತಳೆ, 2 ಇಂಚಿನಷ್ಟು ದೊಡ್ಡದಿರುವ ಅರಿಶಿಣ, ಸ್ವಲ್ಪ ಶುಂಠಿ , ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ, ಅರ್ಧ ಚಮಚ ನಿಂಬೆ ರಸ ಹಾಕಿ ಬ್ಲೆಂಡ್ ಮಾಡಿ ಜ್ಯೂಸ್‌ ಮಾಡಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಸ್ಟ್ರಾಬೆರಿ ಮತ್ತು ಕಿವಿ ಫ್ರೂಟ್: ಸ್ಟ್ರಾಬೆರಿ ಮತ್ತು ಕಿವಿಫ್ರೂಟ್‌ ಜತೆ ಎರಡು ಪುದೀನಾ ಎಲೆ ಹಾಕಿ ಜ್ಯೂಸ್‌ ಮಾಡಿ ಕುಡಿದರೆ ಸುಸ್ತು ಬೇಗನೆ ಕಡಿಮೆಯಾಗುವುದು. ಕಿವಿಫ್ರೂಟ್‌ ದೇಹದಲ್ಲಿ ಬಿಳಿ ರಕ್ತಕಣಗಳು ಹೆಚ್ಚಲು ಸಹಕಾರಿ.ಕುಂಬಳಕಾಯಿ ಬೀಜದ ಜ್ಯೂಸ್: ಹಾಲಿಗೆ ಕುಂಬಳಕಾಯಿ ಬೀಜ ಹಾಕಿ ಜ್ಯೂಸ್ ಮಾಡಿ ಕುಡಿಯುವುದರಿಂದ ನಿಶ್ಯಕ್ತಿ ಕಡಿಮೆಯಾಗುವುದು.

Comments are closed.