ಕರಾವಳಿ

ಜನಾರ್ದನ ಪೂಜಾರಿಗೆ ನಿಂದನೆ: BSNDPಯಿಂದ ಸೆನ್ ಸೈಬರ್ ಠಾಣೆಗೆ ದೂರು

Pinterest LinkedIn Tumblr

ಕುಂದಾಪುರ: ಮಾಜಿ ಕೇಂದ್ರ ಸಚಿವ, ಬಿಲ್ಲವ ಸಮಾಜದ ಮುಂದಾಳು ಜನಾರ್ದನ ಪೂಜಾರಿಯವರನ್ನು ಸಾಮಾಜಿಕ ತಾಣಗಳಲ್ಲಿ ನಿಂದಿಸಿ, ಕೊಲೆ ಬೆದರಿಕೆ ಒಡ್ಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನ ಸಂಘ (ರಿ) ವತಿಯಿಂದ ಉಡುಪಿ ಸೆನ್ ಸೈಬರ್ ಪೋಲೀಸ್ ಠಾಣಾಧಿಕಾರಿಗಳಿಗೆ ದೂರು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ BSNDP ಜಿಲ್ಲಾಧ್ಯಕ್ಷ ಮಹೇಶ್ ಪೂಜಾರಿ, ಚಂದ್ರಶೇಖರ ಬಿಲ್ಲವ, ಸಂದೇಶ್ ಪೂಜಾರಿ, ಕೃಷ್ಣ ಪೂಜಾರಿ, ಕೇಶವ ಸಸಿಹಿತ್ಲು ಮತ್ತು ಸುರೇಂದ್ರ ಪೂಜಾರಿ ಉಪಸ್ಥಿತರಿದ್ದರು.

Comments are closed.