ಕರಾವಳಿ

ಜಪ್ಪಿನಮೊಗರು ಬೆಂಕಿ ಅವಘಡ ಸಂತ್ರಸ್ತರಿಗೆ ತುರ್ತು ಪರಿಹಾರ ಒದಗಿಸಿದ ಶಾಸಕ ಕಾಮಾತ್

Pinterest LinkedIn Tumblr

ಮಂಗಳೂರು : ಮಂಗಳೂರಿನ ಜಪ್ಪಿನಮೊಗರು ಕಾರ್ದೋಲಿಯ ನಿವಾಸಿ ತಾರಾನಾಥ ನಾಯ್ಕ್ ಅವರ ಹಂಚಿನ ಮನೆ ಅಗ್ನಿ ಅವಘಡಕ್ಕೆ ತುತ್ತಾಗಿ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಸಂಭವಿಸಿದ ಸಂದರ್ಭ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಸಂತ್ರಸ್ತರಿಗೆ ತುರ್ತು ಪರಿಹಾರ ಒದಗಿಸುವ ಮೂಲಕ ತಮ್ಮ ಕರ್ತವ್ಯ ನಿಭಾಯಿಸಿದರು.

ತಾರಾನಾಥ ನಾಯ್ಕ್ ಅವರ ಹಂಚಿನ ಮನೆ ಅಗ್ನಿ ಅವಘಡ ದುರಂತದ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಸಂತ್ರಸ್ತರಿಗೆ ಆಗಬೇಕಾದ ಅಗತ್ಯ ಪರಿಹಾರದ ಕುರಿತು ತುರ್ತು ಕ್ರಮಗಳನ್ನು ಕೈಗೊಂಡರು.

ಶಾಸಕರೊಂದಿಗೆ ಮನಪಾ ಸದಸ್ಯ ಸುರೇಂದ್ರ, ಬಿಜೆಪಿ ಮುಖಂಡರಾದ ವಸಂತ ಜೆ ಪೂಜಾರಿ, ಸ್ಥಳೀಯರಾದ ದಿನೇಶ್ ಕುಲಾಲ್, ರಾಮಪ್ರಸಾದ್, ಸುರೇಶ್ ಶೆಟ್ಟಿ, ಸಂದೇಶ ಶೆಟ್ಟಿ, ಮಧುಕರ್ ಕಂಬಿಸ್ತಾನ, ಹಿತೇಶ್, ಕಮಲಾಕ್ಷ, ಅನಿಲ್ ಶೆಟ್ಟಿ, ಯೋಗೀಶ್ ರೈ ಉಪಸ್ಥಿತರಿದ್ದರು.

Comments are closed.