ಕರಾವಳಿ

ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗೋ ಪೂಜೆ

Pinterest LinkedIn Tumblr

ಮಂಗಳೂರು :ಮಂಗಳೂರು ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಗೋ ಪೂಜೆಯನ್ನು ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗೋಪೂಜೆ ಮಹತ್ವವನ್ನು ತಿಳಿಸಿ ಗೋವುಗಳಿಗೆ ಹಾರಾರ್ಪಣೆ ಮಾಡಿ ಅವುಗಳಿಗೆ ಇಷ್ಟವಾದ ವಿವಿಧ ಖಾದ್ಯಗಳನ್ನು ಗೋವುಗಳಿಗೆ ತಿನ್ನಿಸಲಾಯಿತು. ಈ ಗೋ ಪೂಜೆಯನ್ನು ಮಾಜಿ ಶಾಸಕರಾದ ಶ್ರೀ ಜೆ. ಆರ್. ಲೋಬೊ ರವರ ಮಾರ್ಗದರ್ಶನದ ಮೇರೆಗೆ ನಡೆಸಲಾಗಿದೆ.

ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನಮಿತಾ ಡಿ ರಾವ್, ಮಹಾನಗರ ಪಾಲಿಕೆ ಜನಪ್ರತಿನಿಧಿಗಳಾದ ಶ್ರೀಮತಿ ಆಶಾ ಡಿ. ಸಿಲ್ವ, ಶೋಭಾ ಕೇಶವ, ಸರಳಾ ಕರ್ಕೆರಾ, ಗೀತಾ ಅತ್ತಾವರ, ವಿಕ್ಟೋರಿಯ, ವಿಜಯಲಕ್ಷ್ಮೀ, ವಿದ್ಯಾ ಅತ್ತಾವರ, ಗೀತಾ ಪ್ರವೀಣ್, ಪ್ರಮಿತಾ ಕರ್ಕೆರ, ಶ್ರೀಯುತ ಪ್ರಭಾಕರ ಶ್ರೀಯಾನ್, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಳೀಯ ಕಾರ್ಪೊರೇಟರ್ ಪ್ರವೀಣ ಚಂದ್ರ ಆಳ್ವ, ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಯುತ ಕೆ ದೇವೇಂದ್ರ, ಬ್ಲಾಕ್ ಉಪಾಧ್ಯಕ್ಷ ಶ್ರೀ ಸದಾಶಿವ ಅಮೀನ್, ಪ್ರಧಾನ ಕಾರ್ಯದರ್ಶಿ ಶ್ರೀ ದುರ್ಗಾ ಪ್ರಸಾದ್, ಹೇಮಂತ ಗರೋಡಿ, ದಿನೇಶ್ ಬಿ ರಾವ್, ಕೃತಿನ್ ಕುಮಾರ್, ವಾರ್ಡು ಆಧ್ಯಕ್ಷರಾದ ಶ್ರೀ ಭರತ ರಾಮ್, ಉದಯ್ ಕುಂದರ್ ಸ್ಥಳೀಯರಾದ ನಾರಾಯಣ ದಂಪತಿಗಳು, ಶ್ರೀ ರಘುವೀರ ಗಂಗೆಮನೆ ದಂಪತಿಗಳು ಮತ್ತಿತರು ಭಾಗವಹಿಸಿದ್ದರು.

Comments are closed.