ಕರಾವಳಿ

ಮಿನಿ ಜಾಕಿರ್ ಹುಸೇನ್‌ ವಿಜಿತ್ ಹಾಗೂ ಚೆಸ್‌ ಆಟಗಾರ್ತಿ ಯಶಸ್ವಿ ಅವರಿಗೆ ‘ಕಲ್ಕೂರ ಯುವ ಪ್ರಶಸ್ತಿ’ ಗೌರವ

Pinterest LinkedIn Tumblr

ಮಂಗಳೂರು : ಎಳೆಯ ಪ್ರಾಯದಲ್ಲೇ ತಬ್ಲಾ ವಾದಕನಾಗಿ ಸಾಧನೆಗೈದು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಮಿನಿ ಜಾಕಿರ್ ಹುಸೇನ್‌ ಎಂದೇ ಪ್ರಖ್ಯಾತರಾದ ರಾಷ್ಟ್ರೀಯ ಮಟ್ಟದಲ್ಲೂ ಮಿಂಚಿರುವ ವಿಜಿತ್ ಕೆ. ಅವರಿಗೆ ‘ಕಲ್ಕೂರ ಯುವ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

ಪ್ರಸ್ತುತ ಮೈಸೂರಿನ‌ಎನ್. ಐ. ಇ ಕಾಲೇಜಿನಲ್ಲಿ ಮೆಕಾನಿಕಲ್‌ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ವಿಜಿತನನ್ನು ಅ. 10ರಂದು ಮಂಗಳೂರು ಪುರಭವನದಲ್ಲಿ ಜರಗಲಿರುವ ‘ಕಾರಂತ ಹುಟ್ಟುಹಬ್ಬ ಸಮಾರಂಭದಲ್ಲಿ ಜಿಲ್ಲಾ ‌ಉಸ್ತುವಾರಿ ಸಚಿ ವಯು.ಟಿ ಖಾದರ್ ಸಹಿತ ಗಣ್ಯರನೇಕರ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಿ‌ ಅಭಿನಂದಿಸಲಾಗುವುದು. ‌

ಇದೇ ಸಂದರ್ಭ ವಿಶೇಷ ಚೇತನ ವಿದ್ಯಾರ್ಥಿರಾಷ್ಟ್ರೀಯ ಮಟ್ಟದ ಚೆಸ್‌ ಆಟಗಾರ್ತಿ ಯಶಸ್ವಿ ಕೆ ಅವರಿಗೂ‘ಕಲ್ಕೂರ ಯುವ ಪ್ರಶಸ್ತಿ’ ಪ್ರದಾನ ಮಾಡಲಾಗುವುದೆಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ‌ಅಧ್ಯಕ್ಷರಾದ‌ ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ತಮ್ಮ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.