ಕರಾವಳಿ

ಆಯತಪ್ಪಿ ನದಿಗೆ ಬಿದ್ದು ನಾಪತ್ತೆಯಾಗಿದ್ದ ಬೋಟ್ ಕೆಲಸಗಾರ ಶವವಾಗಿ ಪತ್ತೆ

Pinterest LinkedIn Tumblr

ಕುಂದಾಪುರ: ಬೋಟ್ ದುರಸ್ಥಿ ಮಾಡುವಾಗ ಮಂಗಳವಾರ ರಾತ್ರಿ ಸುಮಾರಿಗೆ ಗಂಗೊಳ್ಳಿಯಲ್ಲಿ ನದಿಯ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಶವವು ಕುಂದಾಪುರ ತಾಲೂಕಿನ ಬೀಜಾಡಿ ಕಡಲ ಕಿನಾರೆಅಯಲ್ಲಿ ಬುಧವಾರ ಸಂಜೆ ಸುಮಾರಿಗೆ ಪತ್ತೆಯಾಗಿದೆ.

ಭಟ್ಕಳ ಸೋಡಿಗದ್ದೆ ಬೆಳ್ಕೆ ಎಂಬಲ್ಲಿನ ನಿವಾಸಿ ಮಂಜುನಾಥ ಮೊಗೇರ (32) ಶವವಾಗಿ ಪತ್ತೆಯಾದವರು.

ಮಂಗಳವಾರ ರಾತ್ರಿ ಬೋಟ್ ರಿಪೇರಿ ಕೆಲಸ ಮಾಡುತ್ತಿದ್ದ ಮಂಜುನಾಥ ಮೊಗೇರ ಆಕಸ್ಮಿಕವಾಗಿ ನದಿಯ ನೀರಿಗೆ ಬಿದ್ದಿದ್ದು ನೀರಿನ ಸೆಳೆತ ಜಾಸ್ಥಿಯಿದ್ದ ಕಾರಣ ಕೊಚ್ಚಿಹೋಗಿದ್ದಾರೆ. ಅವರನ್ನು ಹುಡುಕುವ ಪ್ರಯತ್ನ ಮಾಡಿದರೂ ಕೂಡ ಅಸಾಧ್ಯವಾಗಿತ್ತು. ಬುಧವಾರ ಸಂಜೆ ಬೀಜಾಡಿ ಭಾಗದ ಕಡಲ ತೀರದಲ್ಲಿ ವ್ಯಕ್ತಿಯ ಶವವೊಂದು ಬಿದ್ದಿರುವುದು ಕಂಡ ಸ್ಥಳಿಯರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಪೊಲಿಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುವಾಗ ಆತ ಗಂಗೊಳ್ಳಿಯಲ್ಲಿ ನೀರಿಗೆ ಬಿದ್ದು ನಾಪತ್ತೆಯಾದ ಮಂಜುನಾಥ್ ಮೃತದೇಹ ಎಂಬುದು ತಿಳಿದಿತ್ತು.

ಸ್ಥಳಕ್ಕೆ ಕುಂದಾಪುರ ಪಿಎಸ್ಐ ಹರೀಶ್ ಆರ್. ನಾಯ್ಕ್ ಹಾಗೂ ಸಿಬ್ಬಂದಿಗಳು, ಮಾಜಿ ಜಿ.ಪಂ ಸದಸ್ಯ ಗಣಪತಿ ಟಿ. ಶ್ರೀಯಾನ್ ಮೊದಲಾದವರು ಭೇಟಿ ನೀಡಿದ್ದಾರೆ.

Comments are closed.