ಕರಾವಳಿ

ಕೊಲ್ಲೂರು ಸಮೀಪದ ಮುದೂರಿನಲ್ಲಿ ಗಾಳಿ-ಮಳೆ ಅಬ್ಬರ: ಲಕ್ಷಾಂತರ ನಷ್ಟ

Pinterest LinkedIn Tumblr

ಕುಂದಾಪುರ: ಬೈಂದೂರು ವಿಧಾನ ಸಭಾ ಕ್ಷೇತ್ರ, ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿ ಉದಯ ನಗರ ಮುದೂರಿನಲ್ಲಿ ಗುರುವಾರ ಬೀಸಿದ ಭಾರೀ ಮಳೆ ಗಾಳಿಗೆ ಎರಡು ಮನೆ ಹಾಗೂ ಮೂರು ಅಂಗಡಿಯ ಮೇಲ್ಮಾಡು ಹಾರಿ ಹೋಗಿದ್ದು, ಲಕ್ಷಾಂತರ ರೂ.ನಷ್ಟ ಸಂಭವಿಸಿದೆ.

ಉದಯ ನಗರ ಎಸಿ ಸನ್ನಿ ಹಾಗೂ ನಿಕ್ಸನ್ ಎಂಬವರ ಅಂಗಡಿ, ಚೆರಿದಾನಿ ಸನ್ನಿ ಎಂಬವರ ಟೈಲರಿಂಗ್ ಶಾಪ್ ಮತ್ತು ಮನೋಜ್ ಪಿ.ವಿ.ಹಾಗೂ ಪುರುಶೋತ್ತಮನ್ ಎಂಬವರ ಮನೆಯ ಮೇಲ್ಮಾಡು ಗಾಳಿಗೆ ಹಾರಿದ್ದು, 1 ಲಕ್ಷ ರೂ. ನಷ್ಟ ಸಂಭವಿಸಿದೆ. ಸ್ಥಳಕ್ಕೆ ಜಡ್ಕಲ್ ಗ್ರಾಪಂ ಅಧ್ಯಕ್ಷ ಅನಂತಮೂರ್ತಿ ಹಾಗೂ ವಿ‌ಎ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

Comments are closed.