ಕರಾವಳಿ

ಮಾದಕ ವ್ಯಸನ ಮುಕ್ತ ಮಂಗಳೂರು-ಜಾಗೃತಿ ಅಭಿಯಾನ : ಸೇ ನೋ ಟು ಡ್ರಗ್ಸ್, ಸೇ ಎಸ್ ಟು ಲೈಫ್

Pinterest LinkedIn Tumblr

ಮಂಗಳೂರು : ನಗರದ ವಿಕಾಸ್ ಕಾಲೇಜಿನಲ್ಲಿ ಮಂಗಳೂರು ನಗರ ಪೋಲೀಸ್ ಮತ್ತು ವಿಜಯ ಕರ್ನಾಟಕ ಇದರ ಸಹಭಾಗಿತ್ವದಲ್ಲಿ ಮಾದಕ ವ್ಯಸನ ಮುಕ್ತ ದಿನವನ್ನು ಆಚರಿಸಲಾಯಿತು.

ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ಪ್ರಗತಿಪರ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕದ್ರವ್ಯಗಳ ವ್ಯಸನವು ಸಮಾಜದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಮಾದಕವ್ಯಸನಿಗಳನ್ನು ರೋಗಿಗಳಾಗಿ ಗುರುತಿಸಬೇಕೇ ಹೊರತು ಅಪರಾಧಿಗಳನ್ನಾಗಿ ನೋಡಬಾರದು. ಇದನ್ನು ಹತ್ತಿಕ್ಕಲು ದೇಶದ ಪ್ರತಿಯೊಬ್ಬ ಪ್ರಜೆಯು ಸೇ ನೋ ಟು ಡ್ರಗ್ಸ್, ಸೇ ಎಸ್ ಟು ಲೈಫ಼್ ಎಂದು ಹೇಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿದರು.

ಮಂಗಳೂರುದಕ್ಷಿಣ ವಲಯದ ಅಸಿಸ್ಟೆಂಟ್ ಕಮಿಷನರ್ ಆಫ಼್ ಪೋಲೀಸ್  ಕೆ ರಾಮರಾವ್  ಮಾತನಾಡಿ, ಮಾದಕ ವ್ಯಸನವು ಸಮಾಜದ ಬುನಾದಿಯನ್ನು ಶಿಥಿಲ ಗೊಳಿಸುತ್ತಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಪಾಲಕರಂತೆ ಪರಿಗಣಿಸಿ ವ್ಯಸನಮುಕ್ತರಾಗಿ ಸಂತೋಷದ ಜೀವನವನ್ನು ಸಾಗಿಸಬೇಕೆಂದು ಹೇಳಿದರು.

ವಿಜಯಕರ್ನಾಟಕ ಪತ್ರಿಕೆಯ ಉಪ ಸಂಪಾದಕರಾದ  ರವೀಂದ್ರ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳು ಸೈನಿಕರು ಹಾಗೂ ಆರಕ್ಷಕರಿಗೆ ಗೌರವವನ್ನು ನೀಡಬೇಕು ಹಾಗೂ  ಜೀವನವನ್ನು ಸಮಾಜಕ್ಕೋಸ್ಕರ ಮುಡಿಪಾಗಿರಿಸಬೇಕೆಂದು ಹೇಳಿದರು.

ಮಾದಕ ದ್ರವ್ಯ ಸೇವನೆಯ ವಿರುದ್ಧ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು. ಕಾಲೇಜಿನ ಸಂಚಾಲಕರಾದ ಡಾ. ಡಿ. ಶ್ರೀಪತಿರಾವ್, ಟ್ರಸ್ಟಿ ಜೆ ಕೊರಗಪ್ಪ, ಕಂಕನಾಡಿ ಆರಕ್ಷಕ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ಟಿ.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ ರಾಜಾರಾಮ್ ರಾವ್ ರವರು ಸ್ವಾಗತಿಸಿ, ಉಪನ್ಯಾಸಕ ಶ್ರೀ ಲಕ್ಷ್ಮೀಶ ಭಟ್ ನಿರೂಪಿಸಿದರು.

Comments are closed.