ಕರಾವಳಿ

ಪಡಿತರ ಚೀಟಿಗೆ ಹೊಸ ಸದಸ್ಯರ ಹೆಸರು ಸೇರಿಸುವಾಗ ಆದಾಯ ಪ್ರಮಾಣ ಪತ್ರದ ಅಗತ್ಯವಿಲ್ಲ : ಸಚಿವ ಜಮೀರ ಅಹಮ್ಮದ್

Pinterest LinkedIn Tumblr

ಮಂಗಳೂರು ಜುಲೈ 21: ಹೊಸದಾಗಿ ಆನ್‍ಲೈನ್ ಮೂಲಕ ಪಡಿತರ ಚೀಟಿಯಲ್ಲಿ ಕುಟುಂಬ ಸದಸ್ಯರ ಹೆಸರನ್ನು ಸೇರಿಸುವಾಗ ವೈಯಕ್ತಿಕ ಆದಾಯ ಪ್ರಮಾಣ ಪತ್ರದ ಅಗತ್ಯವಿಲ್ಲ ಎಂದು ಅಹಾರ ಮತ್ತು ನಾಗರೀಕ ಸರಬರಾಜು ಗ್ರಾಹಕರ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಹಜ್ ಸಚಿವ ಬಿ.ಹೆಚ್.ಜಮೀರ ಅಹಮ್ಮದ್ ಹೇಳಿದರು.

ಶುಕ್ರವಾರ ಸಕ್ರ್ಯೂಟ್ ಹೌಸ್‍ನಲ್ಲಿ ಪಡಿತರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಪಡಿತರ ಚೀಟಿಯ ಸುಗಮ್ಯ ವಿತರಣೆಗೆ ಅನುಕೂಲವಾಗುವಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಸದ್ಯ ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿ ಮಾರ್ಗದರ್ಶನಗಳನ್ನು ನೀಡಲಾಗಿದೆ ಎಂದರು.

ಪಡಿತರ ವ್ಯವಸ್ಥೆಯನ್ನು ಸ್ಟ್ರೀಂಲೈನ್‍ಗೊಳಿಸಿರುವುದರಿಂದ ಪಡಿತರದಾರರಿಗೆ ಹಾಗೂ ವಿತರಕರಿಗೆ ಹೆಚ್ಚಿನ ಅನುಕೂಲವಾಗಿದ್ದು ಪಡಿತರ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಪಕ ಅನುಷ್ಠಾನಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಆಹಾರ ಇಲಾಖೆಯ ಉಪನಿರ್ದೇಶಕರು(ಪ್ರಭಾರ) ಪ್ರಮೀಳ ಅವರು ಮಾತನಾಡಿ, ತಿದ್ದುಪಡಿಗೆ ಹೋದ ಸುಮಾರು 15ಸಾವಿರ ಪಡಿತರ ಚೀಟಿಗಳು ಮುದ್ರಣಗೊಂಡು ಬಾರದಿರುವ ಬಗ್ಗೆ ಸಚಿವರ ಗಮನಸೆಳೆದರು. ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆಯೂ ಸಚಿವರ ಗಮನಸೆಳೆದರು.

ಪಡಿತರ ಚೀಟಿದಾರರು ತೊಗರಿಬೇಳೆಯ ಬದಲಿಗೆ ಹೆಸರುಕಾಳಿಗೆ ಬೇಡಿಕೆ ಇಟ್ಟಿರುವ ಬಗ್ಗೆಯೂ ಇಲಾಖೆಯ ಸಹಾಯಕ ನಿರ್ದೇಶಕರು ಸಚಿವರಿಗೆ ಮಾಹಿತಿ ನೀಡಿದರು. ಇದೇ ತಿಂಗಳ 25ರಿಂದ ಇಲಾಖೆಯ ನ್ಯಾಯಬೆಲೆ ಅಂಗಡಿ ಹಾಗೂ ಪಡಿತರದಾರರನ್ನು ಖುದ್ದು ಭೇಟಿ ಮಾಡಿ ಪರಿಶೀಲನೆ ನಡೆಸಲು ಕಾರವಾರದಿಂದ ಕಾರ್ಯಕ್ರಮ ಆರಂಭಿಸುವುದಾಗಿ ಸಚಿವರು ಹೇಳಿದರು.

ಜಿಲ್ಲೆಯಲ್ಲಿ 466 ನ್ಯಾಯಬೆಲೆ ಅಂಗಡಿಗಳು ಇದ್ದು 435521 ಪಡಿತರ ಚೀಟಿಗಳು ಇವೆ. ಕಳೆದ ತಿಂಗಳಾಂತ್ಯದವರೆಗೆ 13,413 ಬಿಪಿಎಲ್ ಕಾರ್ಡ್ ವಿತರಣೆಗೆ ಬಾಕಿ ಇದೆ. ಒಟ್ಟು 52752 ಅರ್ಜಿಗಳನ್ನು ಆನ್‍ಲೈನ್ ಮುಖಾಂತರ ಸ್ವೀಕರಿಸಲಾಗಿದೆ. 37,916 ಕಾರ್ಡ್‍ಗಳ ಅರ್ಜಿ ಸ್ವೀಕೃತಗೊಂಡಿದೆ. 1423 ಅರ್ಜಿಗಳು ತಿರಸ್ಕøತಗೊಂಡಿವೆ. ಸಭೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.