ಕರಾವಳಿ

ಮಳೆ ಹಾನಿ : ಶಾಸಕ ವೇದವ್ಯಾಸ ಕಾಮಾತ್‌ರಿಂದ ಸಂತ್ರಸ್ತರಿಗೆ ಪರಿಹಾರ ಧನ ವಿತರಣೆ

Pinterest LinkedIn Tumblr

ಮಂಗಳೂರು,ಜುಲೈ.18 : ಕರಾವಳಿಯಾದ್ಯಂತ ಇತ್ತೀಚೆಗೆ ಸುರಿದ ವಿಪರೀತ ಮಳೆಯಿಂದ ಮನೆ ಕುಸಿತಕ್ಕೊಳಗಾಗಿ ನಷ್ಟ ಅನುಭವಿಸಿದ ಸಂತ್ರಸ್ತರ ಮನೆಗಳಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ತೆರಳಿ ಪರಿಹಾರ ಧನದ ಚೆಕ್ ವಿತರಿಸಿದರು.

ಉಜ್ಜೋಡಿ- ಕಂಕನಾಡಿ ವಾರ್ಡಿನ ಧರ್ಮೆಂದ್ರ ದೇವಾಡಿಗ ಮತ್ತು ಪ್ರಶಾಂತ್ ಭಾಗ್ ನ ರಮೇಶ್ ದೇವಾಡಿಗ ಅವರ ಮನೆ ಇದ್ದ ಪ್ರದೇಶಗಳಿಗೆ ತೆರಳಿದ ಶಾಸಕರು 1,01,900 ರೂಪಾಯಿಯ ಚೆಕ್ ವಿತರಿಸಿದರು.

ಮೇಯರ್ ಭಾಸ್ಕರ ಮೊಯಿಲಿ ಕಾರ್ಪೋರೇಟರ್ ಗಳಾದ ಆಶಾ ಡಿಸಿಲ್ವ, ನವೀನ್ ಚಂದ್ರ ಆಳ್ವ, ಮನಪಾ ಮಾಜಿ ಸದಸ್ಯ ಭಾಸ್ಕರ್ ಚಂದ್ರ ಶೆಟ್ಟಿ, ಬಿಜೆಪಿ ಪ್ರಮುಖರಾದ ವಸಂತ ಜೆ ಪೂಜಾರಿ, ಅಜಯ್ ಉಪಸ್ಥಿತರಿದ್ದರು

Comments are closed.