ಕರಾವಳಿ

ವೇದವ್ಯಾಸ್ ಕಾಮತ್‌ರಿಂದ ಮನೆ ಮನೆಗೆ ತೆರಳಿ ಮತಯಾಚನೆ : ಸಾಥ್ ನೀಡಿದ ಪತ್ನಿ

Pinterest LinkedIn Tumblr

ಮಂಗಳೂರು, ಎಪ್ರಿಲ್.26: ರಾಜ್ಯ ವಿಧಾನಸಭಾ ಚುನಾವಣೆಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ್ ಕಾಮತ್ ಅವರು ಸೆಂಟ್ರಲ್ ವಾರ್ಡ್ ನಂ.33 ರಲ್ಲಿ ಮನೆ ಮನೆಗೆ ಭೇಟಿ ನೀಡಿ ಭಾರತೀಯ ಜನತಾ ಪಾರ್ಟಿ ಪರ ಮತ ಯಾಚಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪೂರ್ಣಿಮಾ, ಮುರಳೀಧರ್ ನಾಯಕ್, ಸೂರಜ್ ಬಜಿಲಕೇರಿ, ರತ್ನಾಕರ ಕುಡ್ವ, ರಮೇಶ್ ಹೆಗ್ಡೆ, ವಿಠಲ್ ಭಟ್, ದೇವದಾಸ್ ನಾಗರಮಟ್, ಶೋಭಾ ಶೆಟ್ಟಿ, ನಮೃತಾ ನಾಗರಮಟ್, ಮಂಜುಳಾ, ಅಸವರಿ, ಮುಕ್ತಾ, ಗೋಪಿ ಭಟ್, ಮುಂತಾದವರು ಉಪಸ್ಥಿತರಿದ್ದರು.

ಮತ ಯಾಚನೆ : ವೇದವ್ಯಾಸ್ ಕಾಮತ್‌ಗೆ ಸಾಥ್ ನೀಡಿದ ಪತ್ನಿ

ಅಭ್ಯರ್ಥಿ ವೇದವ್ಯಾಸ್ ಕಾಮತ್ ಅವರ ಪತ್ನಿ ವೃಂದಾ ವೇದವ್ಯಾಸ ಕಾಮಾತ್ ಅವರು ಸಹ ಪ್ರಚಾರ ಕಾರ್ಯಕ್ಕೆ ಸಾಥ್ ನೀಡಿದ್ದು ಮಹಿಳಾ ಮೋರ್ಚಾದ ಸದಸ್ಯೆಯರೊಂದಿಗೆ ಮನೆಮನೆಗೆ ತೆರಳಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಚಿತ್ರ : ಮಂಜು ನಿರೇಶ್ವಾಲ್ಯ

Comments are closed.