ಮಂಗಳೂರು, ಮಾರ್ಚ್.10: ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಬಿಷಪ್ ಹೌಸ್ಗೆ ಕೇರಳ ಶನಿವಾರ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶ ಆಯಂಟನಿ ಡೊಮಿನಿಕ್ ಭೇಟಿ ನೀಡಿದರು.
ಮಂಗಳೂರು ಬಿಷಪ್ ಅ.ವಂ.ಡಾ.ಅಲೋಶಿಯಸ್ ಪಾವ್ಲ್ ಡಿ ಸೋಜ ಅವರು ನ್ಯಾಯಾಧೀಶರನ್ನು ಸ್ವಾಗತಿಸಿದರು. ಬಳಿಕ ಬಿಷಪ್ ಹೌಸ್ನಲ್ಲಿ ನ್ಯಾಯಾಧೀಶರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಪದಾಧಿಕಾರಿಗಳಾದ ಡೆನ್ನಿಸ್ ಮೊರಾಸ್ ಪ್ರಭು, ಎಂ.ಪಿ.ನರೊನ್ಹ, ಎಸ್.ಡಿ.ಎಂ. ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಸ್.ಡಿ.ಸೆಬಾಸ್ಟಿಯನ್ ಮೊದಲಾದವರು ಉಪಸ್ಥಿತರಿದ್ದರು.
ವಿಲಿಯಂ ಮಿನೇಜಸ್ ವಂದಿಸಿದರು. ಸಿಸ್ಟರ್ ಜಾಸ್ಮಿನ್ ಕಾರ್ಯಕ್ರಮ ನಿರೂಪಿಸಿದರು.
Comments are closed.