ಕರಾವಳಿ

ಕುಂದಾಪುರ: ಮಹಿಳಾ ಕಾನ್ಸ್‌ಟೆಬಲ್‌ಗೆ ಬೆದರಿಕೆ

Pinterest LinkedIn Tumblr

ಕುಂದಾಪುರ: ಕೇಸಿನ ವಿಚಾರವೊಂದರಲ್ಲಿ ವ್ಯಕ್ತಿಗಳು ಕರೆ ಮಾಡಿ ಹಾಗೂ ಠಾಣೆಗೆ ಬಂದು ಮಹಿಳಾ ಕಾನ್ಸ್‌ಟೆಬಲ್‌ಗೆ ಬೆದರಿಕೆ ಹಾಕಿದ ಘಟನೆ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಂದಾಪುರ ಪೊಲೀಸ್ ಠಾಣಾ ಸಿಬ್ಬಂದಿ ಜ್ಯೋತಿ ಎಂ. ಎನ್ನುವವರು ಠಾಣೆಯಲ್ಲಿ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ 11:41 ಗಂಟೆಗೆ ಅವರ ಮೊಬೈಲ್ ಗೆ ಕರೆ ಮಾಡಿದ ವ್ಯಕ್ತಿಯು ತಾನು ಶಿವ ಮಾತನಾಡುವುದು, ಎಂದು ಹೇಳಿ ನೀನು ಹಾಗೂ ನಿಮ್ಮ ಠಾಣೆಯ ಪೊಲೀಸ್ ರಾಘವೇಂದ್ರ ಸೇರಿ ನನ್ನ ಗೆಳೆಯ ಟಿಂಕು @ ವೆಂಕಟೇಶನನ್ನು ಜಾಮೀನು ಸಿಗದ ಸೆಕ್ಷನ್ ಹಾಕಿ ಕೇಸ್ ಮಾಡಿ ಜಾಮೀನು ಸಿಗದಂತೆ ಮಾಡಿದ್ದೀರೆಂದು ಬೆದರಿಕೆ ಹಾಕಿದ್ದಾರೆ. ಬಳಿಕ ಮಧ್ಯಾಹ್ನ 3:55 ಗಂಟೆಗೆ ಅದೇ ನಂಬರಿನಿಂದ ಶಿವನು ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ಬೈದು ಬೆದರಿಕೆ ಹಾಕಿರುತ್ತಾರೆ. ಅಲ್ಲದೆ ಸಂಜೆ ಕರೆ ಮಾಡಿದ ಶಿವ ಹಾಗೂ ಆತನ ಸ್ನೇಹಿತರಾದ ಟಿಂಕು @ ವೆಂಕಟೇಶ ಮತ್ತು ಗಣಪತಿ ಆಚಾರ್ಯ ಎಂಬುವವರು ಠಾಣೆಗೆ ಬಂದು ಠಾಣೆಯಲ್ಲಿ ಅರ್ಜಿ ನೊಂದಣಿಯನ್ನು ಬರೆಯುತ್ತಿರುವ ವೇಳೆ ಜ್ಯೋತಿ ಅವರಿಗೆ ಶಿವನು ಬೆದರಿಕೆ ಹಾಕಿದ್ದು ಶಿವನ ಜೊತೆಯಲ್ಲಿದ್ದ ಆರೋಪಿತರಾದ ಟಿಂಕು @ ವೆಂಕಟೇಶ ಮತ್ತು ಗಣಪತಿ ಆಚಾರ್ಯ ಎನ್ನುವವರು ಅವಾಚ್ಯ ಶಬ್ಧಗಳಿಂದ ಬೈದು ಸರ್ಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Comments are closed.