ಮಂಗಳೂರು: ಫೆಬ್ರವರಿ. 20 ಹಾಗೂ 21ರಂದು ಮಂಗಳೂರಿನಲ್ಲಿ ಆಯೋಜಿಸಲಾಗಿರುವ “ಅಮೃತ ಸಂಗಮ-2018′ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಅಗ್ರಗಣ್ಯ ಆಧ್ಯಾತ್ಮಿಕ ನೇತಾರರಾದ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ (ಅಮ್ಮ) ಅವರು ಸೋಮವಾರ ಸಂಜೆ ಮಂಗಳೂರಿನ ಬೋಳೂರು ಅಮೃತಾನಂದಮಯಿ ಮಠಕ್ಕೆ ಆಗಮಿಸಿ, ಬಳಿಕ ಮಂಗಳವಾರ ಮುಂಜಾನೆಯಿಂದಲೇ ನೂರಾರು ಭಕ್ತರನ್ನು ಅಮ್ಮನವರು ಆಶೀರ್ವದಿಸಿದರು.
20ರಂದು ಬೆಳಗ್ಗೆ 7ರಿಂದ ಸತ್ಸಂಗ, ಭಜನೆ, ಧ್ಯಾನ ನಡೆಯಿತು.. 10 ಗಂಟೆಯಿಂದ ಅಮ್ಮನವರು ಪ್ರವಚನ ನಡೆಸಿಕೊಟ್ಟರು. ಮಾನಸ ಪೂಜೆ ಮತ್ತು ಅಮ್ಮನವರ ಅನುಗ್ರಹ ದರ್ಶನಕ್ಕೂ ಅವಕಾಶ ಕಲ್ಪಿಸಲಾಯಿತು. ಪ್ರತಿದಿನ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಉದಯಾಸ್ತಮಾನ, ವಿಶೇಷ ಪೂಜೆಗಳು ಜರಗಿತು. ನವಗ್ರಹ ಶಾಂತಿ ಹೋಮ, ಮಹಾ ಸುದರ್ಶನ ಹೋಮ, ಭಗವತಿ ಪೂಜೆ, ಅಲಂಕಾರ ಪೂಜೆ ಸಹಿತ ವಿವಿಧ ಅರ್ಚನೆಗಳು ನಡೆಯಿತು.
ಕಾರ್ಯಕ್ರಮದಲ್ಲಿ 25 ಮಂದಿಗೆ ಗಾಲಿ ಕುರ್ಚಿ, ಬಡ ವಿದ್ಯಾರ್ಥಿಗಳಿಗೆ ಅಮೃತ ಸ್ಕಾಲರ್ಶಿಪ್ ವಿತರಣೆ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ವಿತರಣೆ, ಅಮಲ ಭಾರತ (ಸ್ವತ್ಛ ಭಾರತ) ಅಭಿಯಾನದ ಅಂಗವಾಗಿ ಶಾಲೆ ಗಳಲ್ಲಿ ಸ್ವತ್ಛತೆಗಾಗಿ ಮೂರು ಬಣ್ಣಗಳ ಕಸದ ಬುಟ್ಟಿಗಳ ವಿತರಣೆ, ಶತಮಾನೋತ್ಸವ ಆಚರಿಸಿದ ಉರ್ವಾ ಗಾಂಧಿನಗರದಲ್ಲಿರುವ ಸ.ಹಿ.ಪ್ರಾ. ಶಾಲೆಗೆ ಕ್ರೀಡಾ ಸಾಮಗ್ರಿಗಳ ಕೊಡುಗೆ, ಅಮೃತ ಶ್ರೀ ಯೋಜನೆಯ ಮಹಿಳಾ ಸ್ವಾವಲಂಬಿ, ಸ್ವ ಉದ್ಯೋಗ ಯೋಜನೆಯ ಅಂಗವಾಗಿ ಹೊಲಿಗೆ ಯಂತ್ರ ವಿತರಣೆ, “ಕಾರುಣ್ಯ ತೀರ’ ಪುಸ್ತಕ ಬಿಡುಗಡೆ, ಅಂಚೆ ಚೀಟಿ, ಕವರ್ ಅನಾವರಣ, ಅಮೃತ ಶ್ರೀ ಯೋಜನೆಯ ಸದಸ್ಯರಿಗೆ ಸೀರೆ ವಿತರಣೆ ಮುಂತಾದ ಕಾರ್ಯಕ್ರಮಗಳು ನಡೆಯಿತು.
Comments are closed.