ಕರಾವಳಿ

ಉಪ್ಪಳ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ನಿಮಿತ್ತ ತಿರುವಾದಿರ ಕಾರ್ಯಕ್ರಮ

Pinterest LinkedIn Tumblr

ಉಪ್ಪಳ: ಉಪ್ಪಳ ಶ್ರೀ ಉಪ್ಪಳ ಭಗವತೀ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಕಲಶಾದಿ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ಇತ್ತೀಚೆಗೆ ನಡೆಯಿತು.

ಕ್ಷೇತ್ರದ ಮುಂಬಾಗದ ಪಡಿಪ್ಪರದ ಉದ್ಘಾಟನೆಯನ್ನು ಮಂಗಳೂರಿನ ಉದ್ಯಮಿಗಳಾದ ನವೀನ್ ಕುಮಾರ್ ಮತ್ತು ಅನಿತಾ ದಂಪತಿಯವರು ಮಾಡಿದರು.

ಶೀಟಿನ ಮೇಲ್ಚಾವಡಿಯನ್ನು ಯು. ಜಯರಾಮ, ರೇವತಿ, ಸಂಜೀವ ಮಾಸ್ತರ್ ಉಕ್ಕುಡ, ಲಲಿತಾ ಜನಾರ್ಧನ್ ಬಿ. ಎಂ, ಉಮಾವತಿ ರಾಘವ, ದೇವಕಿ ಚಂದಕಾರ್ನವರ್ ಜೊತೆಯಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು.

ನಂತರ ಭಗವತೀ ಮಹಿಳಾ ಸಂಘದ ವತಿಯಿಂದ, 104 ಸುಮಂಗಲೆಯರಿಂದ ತಿರುವಾದಿರ ನೃತ್ಯ ಕಾರ್ಯಕ್ರಮ. ಐಲ ಮಲಯಾಳೀ ಬಿಲ್ಲವ ಸಂಘದ ಪ್ರಾಯೋಜಕತ್ವದಲ್ಲಿ ಶ್ರೀ ಶಾರದಾಂಬ ಭಜನಾ ಮಂದಿರ ಮೊಗವೀರ ಪಟ್ನ ಶಾರದಾ ನಗರ ಇವರಿಂದ ಕುಣಿತ ಭಜನೆ ಕಾರ್ಯಕ್ರಮ ಮತ್ತು ಪುಟಾಣಿಗಳಿಂದ ನೃತ್ಯ ವೈವಿದ್ಯ ಕಾರ್ಯಕ್ರಮ ನಡೆಯಿತು.

Comments are closed.