ಮಂಗಳೂರು : ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಮಾರ್ಚ್ 5,6,7ರಂದು ಜರಗಲಿರುವ 22ನೇ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನದ ‘ಲಾಂಛನ’ವನ್ನು ಹಿರಿಯ ಸಾಹಿತಿ ಪ್ರೊ|| ಅಮೃತ ಸೋಮೇಶ್ವರಅವರು ಬಿಡುಗಡೆಗೊಳಿಸಿದರು.
ಕೋಟೇಕಾರ್ನಲ್ಲಿರುವ ಅಮೃತರ ಮನೆ ಒಲುಮೆಯಲ್ಲಿ ಸಮಾರಂಭ ಜರಗಿತು. ಇದೇ ಸಂದರ್ಭ ಲಾಂಛನವನ್ನು ಸಿದ್ದಪಡಿಸಿದ ಕಲಾವಿದ ಜಾನ್ಚಂದ್ರನ್ ಅವರನ್ನೂ ಅಮೃತ ಸೋಮೇಶ್ವರರು ಶಾಲು ಹೊದಿಸಿ ಅಭಿನಂದಿಸಿದರು.
ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ| ಡಾ.ಕೆ. ಚಿನ್ನಪ್ಪಗೌಡಅಮೃತರ ಬಗ್ಗೆ ಅಭಿನಂದನಾ ಭಾಷಣ ಮಾಡಿದರುಅಮೃತರು ಬರೆದ ಭಾವಗಾನವೊಂದನ್ನುರತ್ನಾವತಿಜೆ. ಬೈಕಾಡಿಯವರು ಹಾಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ| ಸುರೇಂದ್ರರಾವ್ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಬೈಕಾಡಿಜನಾದನಆಚಾರ್ ವಂದನಾರ್ಪಣೆಗೈದರು,
Comments are closed.