ಕರಾವಳಿ

ಬಿಜೆಪಿಯವರು ಡೋಂಗಿ ಹಿಂದೂಗಳು: ಉಡುಪಿಯಲ್ಲಿ ಉಗ್ರಪ್ಪ ವಾಗ್ದಾಳಿ!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಉಡುಪಿ, ಕುಂದಾಪುರ, ಬೈಂದೂರು ಹಾಗೂ ಕಾಪು ಅವಿರೋಧ ಹೆಸರು ಬಂದಿದ್ದು ಕಾರ್ಕಳದಲ್ಲಿ ಆರೋಗ್ಯಕರ ಸ್ಪರ್ಧೆ ಇದೆ, ಪಕ್ಷದಲ್ಲಿ ಮೂರು ಜನ ಉಮೇದುವಾರರಿದ್ದು ಮೂವರನ್ನು ಕೂರಿಸಿ ಒಮ್ಮತದ ಅಭಿಪ್ರಾಯಕ್ಕೆ ಬರುತ್ತೇವೆ. ಪಕ್ಷದ ಉತ್ಸಾಹ ಇಮ್ಮಡಿಯಾಗಿದ್ದು ಈ ಬಾರಿ ಐದೂ ಕ್ಷೇತ್ರ ಗೆಲ್ಲುತ್ತೇವೆ ರಾಜ್ಯದಲ್ಲಿ ಸರ್ಕಾರದ ಪರವಾದ ಅಲೆ ಇದೆ ಎಂದು ವಿ.ಪ. ಸದಸ್ಯ ಉಗ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಅವರಿಗೆ ಜನ ಬೆಂಬಲ ಸಿಕ್ಕಿದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ಧ. ರಾಜ್ಯದಲ್ಲಿ ಸಾಮಾಜಿಕ ನ್ಯಾಯ – ಮತೀಯ ಶಕ್ತಿ ನಡುವಿನ ಫೈಟ್
ಹಾಗೂ ಹಗರಣ ರಹಿತ- ಜೈಲಿಗೆ ಹೋದವರ ನಡುವೆ ಫೈಟ್ ನಡೆಯಲಿದೆ. ಮೋದಿ- ಅಮಿತ್ ಶಾ ಹತಾಶರಾಗಿದ್ದಾರೆ, ಇರ್ವರು ಸುಳ್ಳಿನ ಸರಮಾಲೆ ಪೋಣಿಸುವುದರಲ್ಲಿ ನಿಪುಣರಾಗಿದ್ದು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಕಿಡಿಕಾರಿದ್ದಾರೆ. ಬಿಎಸ್ ವೈ ಅಧಿಕಾರದಲ್ಲಿದ್ದಾಗ ಸ್ಲಂ ಜ್ಞಾಪಕ ಕ್ಕೆ ಬರಲಿಲ್ಲ, ರಾಜ್ಯದ ರೈತರು ಜ್ಞಾಪಕಕ್ಕೆ ಬಂದಿಲ್ಲ. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಯಡಿಯೂರಪ್ಪನಿಗೆ ಈಗ ಎಲ್ಲಾ ನೆನಪಾಗುತ್ತದೆ ಎಂದರು.

ನಾನು ಶ್ರೀಕೃಷ್ಣಮಠಕ್ಕೆ ಭೇಟಿ ಕೊಟ್ಟಿದ್ದೇನೆ, ಪರ್ಯಾಯ ಮತ್ತು ಪೇಜಾವರ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದೇನೆ, ನಾವು ನಿಜವಾದ ಹಿಂದೂಗಳಾಗಿದ್ದು ಬಿಜೆಪಿಯವರು ಡೋಂಗಿ ಹಿಂದೂಗಳು. ವಿವೇಕಾನಂದರ ಹಿಂದುತ್ವದ ಮೇಲೆ ವಿಶ್ವಾಸವಿದೆ. ರಾಹುಲ್ ಗಾಂಧಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ, ರಾಹುಲ್ ಗಾಂಧಿ ಕೃಷ್ಣಮಠದ ಭೇಟಿ ಇರಬಹುದು ಆದರೇ ಮಠ ಭೇಟಿಯಿಂದ ಓಟು ಗಳಿಸುವ ಮನಸ್ಥಿತಿ ನಮ್ಮ ನಾಯಕರಲ್ಲಿ ಇಲ್ಲಎಂದ ಅವರು ಕನಕದಾಸರನ್ನು ಕರೆಸಿಕೊಂಡಿರುವ ಶ್ರೀಕೃಷ್ಣ ಸಿಎಂ ಸಿದ್ದರಾಮಯ್ಯ ಅವರನ್ನು ಕರೆಸಬಹುದು ಎಂದರು.

Comments are closed.