ಕರಾವಳಿ

ಕಾರ್ಕಳದಲ್ಲಿ 30 ನಾಡ ಬಾಂಬ್ ಪತ್ತೆ: ಮೂವರ ಬಂಧನ

Pinterest LinkedIn Tumblr

ಉಡುಪಿ: ಟಿವಿಎಸ್ ಜ್ಯೂಪಿಟರ್ ನಲ್ಲಿ ಸಾಗಿಸುತ್ತಿದ್ದ 30 ನಾಡ ಬಾಂಬ್ ಪತ್ತೆ ಹಚ್ಚಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿವಪುರ ಗ್ರಾಮದ ಬಳಿ ಹೆಬ್ರಿ ಪೊಲೀಸರು ಈ ಕಾರ್ಯಚರಣೆ ನಡೆಸಿದ್ದಾರೆ.

ಖಚಿತ ವರ್ತಮಾನದಂತೆ ನಾಡಾ ಬಾಂಬ್ ಸಾಗಿಸುತ್ತಿದ್ದ ನಾಗೇಶ್ ನಾಯಕ್ ಎನ್ನುವಾತನನ್ನು ಬಂಧಿಸಿದ್ದು ಆತ ವಿಚಾರಣೆ ವೇಳೆ ಕಾಡು ಪ್ರಾಣಿಗಳನ್ನ ಸಾಯಿಸಲು ನಾಡ ಬಾಂಬ್ ಹಣ ಕೊಟ್ಟು ಖರೀದಿ ಮಾಡಿರುವುದಾಗಿ ಹೇಳಿಕ ನೀಡಿದ್ದಾನೆ. ಈ ಹಿನ್ನಲೆಯಲ್ಲಿ ನಾಡಬಾಂಬ್ ತಯಾರಿಸಕೊಟ್ಟ ಗುಣಕರ ಶೆಟ್ಟಿ ಹಾಗೂ ಲಚ್ಚು ಶೆಟ್ಟಿ ಎನ್ನುವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸುಮಾರು 15 ಸಾವಿರಕ್ಕೆ 30 ನಾಡಬಾಂಬ್ ತಯಾರಿಸಕೊಟ್ಟಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.