ಕರಾವಳಿ

ಶ್ರೀ ವಿಠೋಭ ದೇವಸ್ಥಾನ ಮುಂಡ್ಕುರು : ಸಹಸ್ರ ಕುಂಭಾಭಿಷೇಕ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಮಹಾ ಪ್ರಾರ್ಥನೆ

Pinterest LinkedIn Tumblr

ಮಂಗಳೂರು, ನವೆಂಬರ್.16 : ಶ್ರೀ ವಿಠೋಭ ದೇವಸ್ಥಾನ ಮುಂಡ್ಕುರುನಲ್ಲಿ ದಿನಾಂಕ 19-11-2017 ರಂದು ನಡೆಯಲಿರುವ ಸಹಸ್ರ ಕುಂಭಾಭಿಷೇಕ ಪ್ರಯುಕ್ತ ಇಂದು ಶ್ರೀ ದೇವರ ಸನ್ನಿಧಿಯಲ್ಲಿ ಮಹಾ ಪ್ರಾರ್ಥನೆ, ಶಾಂಭವಿ ನದಿ ತಟದಲ್ಲಿ ವೈದಿಕರಿಂದ ಯಮುನಾ ಪೂಜೆ, ಗಣಹೋಮ, ಮಂಟಪ ಶುದ್ಧಿ, ರಾತ್ರಿ ವಾಸ್ತು ಹವನ, ನಡೆಯಿತು.

ಸಹಸ್ರ ಕುಂಭಾಭಿಷೇಕವು ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ನಡೆಯಲಿರುವುದು , ದಿನ ನಿತ್ಯ ರಾತ್ರಿ ಭವ್ಯ ಭುವನೇಂದ್ರ ಕಲಾ ಮಂಟಪದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮ ಆಯೋಜಿಸಲಾಗಿದೆ .

ಶುಕ್ರವಾರ ಸಾಯಂಕಾಲ ಪರಮ ಪೂಜ್ಯ ಶ್ರೀಗಳವರ ಆಗಮನ ನೆರವೇರಲಿದ್ದು ಸಮಾಜ ಭಾಂಧವರು ಈ ಎಲ್ಲ ಪುಣ್ಯಪ್ರದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ಹರಿಗುರು ಕ್ರಪೆಗೆ ಪಾತ್ರರಾಗಬೇಕಾಗಿ ಎಂ .ಜಗನ್ನಾಥ್ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.