ಕರಾವಳಿ

ಶ್ರೀಕೃಷ್ಣ- ಮಂಜುನಾಥ ಸ್ವಾಮಿ ಸಿಎಂ ಅವರನ್ನು ಕ್ಷಮಿಸಲ್ಲ: ಬಿ.ಎಸ್. ಯಡಿಯೂರಪ್ಪ

Pinterest LinkedIn Tumblr

ಉಡುಪಿ/ಕಾಪು: ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ದೊಡ್ಡ ಅತ್ಯಚಾರಿಯಾಗಿದ್ದು ಇಬ್ಬರು ಸೇರಿ ರಾಜ್ಯ ಕೊಳ್ಳೆ ಹೊಡೆಯುತ್ತಿದ್ದಾರೆ. ದಿನೇಶ್ ಗುಂಡೂರಾವ್ ಪಿ.ಎಫ್.ಐ ಬ್ಯಾನ್ ಮಾಡ್ತೇವೆ ಎಂದು ಹೇಳ್ತಾರೆ, ಮುಖ್ಯಮಂತ್ರಿಗಳು ಪಿ.ಎಫ್.ಐಗೆ ಸಪೋರ್ಟ್ ಮಾಡ್ತಾರೆ. ಕಾಂಗ್ರೆಸ್ ಮಂದಿ ರಾಜಕೀಯ ದೊಂಬರಾಟ ಮಾಡ್ತ ಇದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಅರಬ್ಬಿ ಸಮುದ್ರದಲ್ಲಿ ಮುಳುಗಿಸಬೇಕು. ಬಿಜೆಪಿಯ ಕಮಲವನ್ನು ಅರಳಿಸಬೇಕು ಎಂದು ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಉಡುಪಿ ಶ್ರೀಕೃಷ್ಣಮಠಕ್ಕೆ ಸಿಎಂ ಬರದಿರುವುದು ಒಳ್ಳೆದಾಗಿದ್ದು ಸಿಎಂ ಬಂದ್ರೆ ಕೃಷ್ಣ ಮಠ ಅಪವಿತ್ರ ಆಗುತ್ತಿತ್ತು. ಧರ್ಮಸ್ಥಳ ದೇವಸ್ಥಾನಕ್ಕೆ ಸಿಎಂ ಮೀನು- ಮಾಂಸ ತಿಂದು ಹೋದರು. ಮಂಜುನಾಥ ಸ್ವಾಮಿ ಬಾಗಿಲಲ್ಲೇ ತಡೆದು ನಿಲ್ಲಿಸಿದರು. ದೇವಸ್ಥಾನದ ಒಳಗೆ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ, ಶ್ರೀಕೃಷ್ಣ- ಮಂಜುನಾಥ ನಿಮ್ಮನ್ನು ಕ್ಷಮಿಸಲ್ಲ ಎಂದರು.

ನಾನು ರಕ್ತದಲ್ಲಿ ಬರೆದುಕೊಡುತ್ತೇನೆ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ, ನಾನು ಸಿಎಂ ಆಗಲು ಪರಿವರ್ತನಾ ಯಾತ್ರೆ ಮಾಡುತ್ತಿಲ್ಲ ಬದಲಾಗಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಯಾತ್ರೆ ಹೊರಟಿದ್ದೇನೆ ಎಂದ ಅವರು ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ನಾಳೆ ಚಳಿಗಾಲದ ಅಧಿವೇಶನ ನಡೆಯಲು ಬಿಡಲ್ಲ, ಕ್ಲೀನ್ ಚಿಟ್ ಸಿಕ್ಕ ಎಲ್ಲ ಕೇಸು ಮರು ತನಿಖೆ ಮಾಡುತ್ತೇನೆ, ಸತ್ಯಾಂಶವನ್ನು ಹೊರಗೆಳೆಯುತ್ತೇನೆ ಎಂದರು.

ಮೋದಿಯೆದುರು ಸಿದ್ದರಾಮಯ್ಯ ಬಚ್ಚ, ನಿಮಗೆ ಯಾರು ಭಯಪಡ್ತಾರೆ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ ಬಿ.ಎಸ್.ವೈ ಪ್ರಧಾನಿಯ ಮೋದಿಯ ಮೇಲೆ ಒಂದೂ ಆರೋಪಗಳಿಲ್ಲ ಎಂದು ಹೇಳಿದರು.

ನಿದ್ರಾದೇವಿ ಕುಂಭಕರ್ಣನ ಮಡದಿಯಾಗಿದ್ದು ಕುಂಭಕರ್ಣ ಸತ್ತ ನಂತರ ನಿದ್ರಾದೇವಿ ಸಿಎಂ ಸಿದ್ದರಾಮಯ್ಯರನ್ನು ಅಪ್ಪಿಕೊಂಡಿದ್ದಾಳೆ. ಕುಂಭಕರ್ಣನ ಹತ್ಯೆಯ ನಂತರ ಸಿದ್ದರಾಮಯ್ಯರನ್ನು ಆಶ್ರಯಿಸಿದ್ದಾಳೆ. ರಾವಣನಿಗಿಂತ ಸಿದ್ದರಾಮಯ್ಯ ದುಷ್ಟರಾಗಿದ್ದು ರಾವಣ ಸೀತೆಯ ಅಪಹರಣ ಮಾತ್ರ ಮಾಡಿದ್ದ, ಸಿದ್ದರಾಮಯ್ಯ ಹಿಂದೂ ಸಮಾಜ ಒಡೆಯುತ್ತಿರುವುದಲ್ಲದೇ ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿದ್ದಾರೆ. ಗೋವು ಹತ್ಯೆ ಗೆ ಬೆಂಬಲವಾಗಿ ನಿಲ್ಲುತ್ತಿದ್ದಾರೆ,ಹಿಂದೂ ಸಂಸ್ಕೃತಿ ನಾಶ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಇದೇ ಸಮಯದಲ್ಲಿ ಯಡಿಯೂರಪ್ಪ ರಾಮಭಕ್ತನಾಗಿ ಬರುತ್ತಾರೆ, ಬಿಎಸ್ ವೈ ರಾಜ್ಯದಲ್ಲಿ ಸವಾರಿ ಮಾಡುತ್ತಾರೆ,ಸಿದ್ದರಾಮಯ್ಯ ನನ್ನು ನಾಶ ಮಾಡಿಬಿಡುತ್ತಾರೆ, ಸಿದ್ದರಾಮಯ್ಯ ಅವರಿಗೆ ಯಡಿಯೂರಪ್ಪ ಅವರಿಂದ ಮುಕ್ತಿ ಸಿಗುತ್ತದೆ ಎಂದು ಕಾಪುವಿನಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯನನ್ನು ನೋಡಿ ನರೇಂದ್ರ ಮೋದಿ ಹೆದರುತ್ತಾರಂತೆ, ತಲೆಕೆಟ್ಟವರು ಮಾತ್ರ ಈ ರೀತಿ ಹೇಳಿಕೆ ಕೊಡೊದಕ್ಕೆ ಸಾಧ್ಯವಾಗಿದ್ದು ಸಿದ್ದರಾಮಯ್ಯನಂತ ಹೆಗ್ಗಣ ಯಾವ ಊರಿನಲ್ಲಿಯೂ ಇಲ್ಲ. ಅನ್ನಭಾಗ್ಯದ ಅಕ್ಕಿ ಕನ್ನಭಾಗ್ಯ ಆಗಿದೆ. ಮರಣಭಾಗ್ಯ ಒಂದನ್ನು ಬಿಟ್ಟು ಉಳಿದೆಲ್ಲಾ ಭಾಗ್ಯ ಸಿದ್ದರಾಮಯ್ಯ ಕೊಟ್ಟಿದ್ದಾರೆ. ಇಂತವರಿಂದ ನವಕರ್ನಾಟಕ ರಾಜ್ಯ ನಿರ್ಮಾಣ ಅಸಾಧ್ಯ ಎಂದು ಕಾಪುವಿನಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ.

ಕಳೆದ ನಾಲ್ಕೂವರೆ ವರುಷದಲ್ಲಿ ನಿಮ್ಮ ಸಾಧನೆ ಏನು ಸಿದ್ದರಾಮಯ್ಯನವರೇ? ಕೇವಲ ಅನ್ನಭಾಗ್ಯ, ಶಾದಿಭಾಗ್ಯ ಮಾತ್ರ ನಿಮ್ಮ ಸಾಧನೆಯಾಗಿದೆ. ಅನ್ನಭಾಗ್ಯ ಯೋಜನೆ ಕೇಂದ್ರದ ಯೋಜನೆಯಾಗಿದ್ದು ಆದ್ರೆ ಅನ್ನಭಾಗ್ಯ ಸಿದ್ದರಾಮಯ್ಯದು ಅಂತಿದ್ದಾರೆ. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಬೇರೆ ರಾಜ್ಯಕ್ಕೆ ಮಾರುತ್ತಿದ್ದಾರೆ, ಕಾಂಗ್ರೆಸ್ ಪುಡಾರಿಗಳು ಮಾರಾಟದಲ್ಲಿ ತೊಡಗಿದ್ದಾರೆ. ಮುಸಲ್ಮಾನರ ಮೂಗಿಗೆ ತುಪ್ಪ ಸವರಿ ಮತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಕರಾವಳಿಯಲ್ಲಿ ೧೯ ಹಿಂದೂ ನಾಯಕರ ಕೊಲೆ ನಡೆದಿದೆ. ಸಿದ್ದರಾಮಯ್ಯ ಕೊಲೆಗಡುಕರೊಂದಿಗೆ ಮಾತುಕತೆ ನಡೆಸುತ್ತೀರಿ, ಪಿಎಫ್ಐ, ಎಸ್ಡಿಪಿಐ ಕೊಲೆಗಡುಕ ಕೃತ್ಯದಲ್ಲಿ ಪಾಲ್ಗೊಂಡಿವೆ, ಅಂತವರ ಜೊತೆ ಮಾತುಕತೆ ನಡೆಸುತ್ತಿರುವುದು ಆತಂಕಕಾರಿ. ಮುಂದಿನ ಚುನಾವಣೆ ವಿಚಾರವಾಗಿ ಮಾತುಕತೆ ನಡೆಸುತ್ತಿರಿ ಎಂದರು. ನಾವು ಮುಸಲ್ಮಾನರ ವಿರೋಧಿಗಳಲ್ಲ, ಆದ್ರೆ ದೇಶದ್ರೋಹಿ ಚಟುವಟಿಕೆ ಸಹಿಸಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ದುರಂಕಾರಿ, ಹಿಟ್ಲರ್ ಸಿಎಂ ಬೇರು ಸಹಿತ ಕಿತ್ತು ಹಾಕ್ಬೇಕು, ತಾಕತ್ತಿದ್ರೆ ಪರಿವರ್ತನಾ ಯಾತ್ರೆ ನಿಲ್ಲಿಸಿ ನೋಡಿ, ನಮ್ಮ ಕಾರ್ಯಕರ್ತರ ತಂಟೆಗೆ ಬಂದ್ರೆ ಹುಷಾರ್. ಉತ್ತರ ಕರ್ನಾಟಕ ದಲ್ಲಿ‌ ಕಾಂಗ್ರೆಸ್ ದೂಳಿಪಟ ಆಗುತ್ತೆ ಎಂದು ಶ್ರೀರಾಮುಲು ಸವಾಲ್ ಹಾಕಿದ್ದಾರೆ.

 

 

Comments are closed.