ಕರಾವಳಿ

ಆಗುಂಬೆ ಘಾಟ್: ವಿಷವಿಕ್ಕಿ 20 ಮಂಗಗಳ ಮಾರಣಹೋಮ

Pinterest LinkedIn Tumblr

ಶಿವಮೊಗ್ಗ/ಉಡುಪಿ: ಶಿವಮೊಗ್ಗದ ಆಗುಂಬೆ ಘಾಟ್​​​​​​ನಲ್ಲಿ ಸುಮಾರು 20ಕ್ಕೂ ಹೆಚ್ಚು ಮಂಗಗಳಿಗೆ ವಿಷಪ್ರಾಷನ ಮಾಡಲಾಗಿದ್ದು ಮಂಗಗಳ ಮಾರಣಹೋಮ ನಡೆದಿದೆ.

ವಾನರಗಳಿಗೆ ವಿಷಪ್ರಾಷನ ಮಾಡಿದ ಬಳಿಕ ನಾಲ್ಕು ಗೋಣಿ ಚೀಲಗಳಲ್ಲಿ ತುಂಬಿಸಿ ಘಾಟ್ ಪ್ರದೇಶದಲ್ಲಿ ಎಸೆಯಲಾಗಿದೆ. ಮಂಗಗಳು ನರಳಿ ನರಳಿ ಸಾಯುತ್ತಿವೆ. ಆಗುಂಬೆ ಘಾಟ್ ಎರಡನೇ ಸುತ್ತಿನಲ್ಲಿ ಮಂಗಗಳ ಮಾರಣಹೋಮ ಕಂಡುಬಂದಿದೆ.

ಮೂಕ ಪ್ರಾಣಿಗಳು ನರಳಾಡುತ್ತಿರುವುದನ್ನು ಕಂಡ ಸ್ಥಳೀಯರು ಮತ್ತು ಪ್ರವಾಸಿಗರು ಅವುಗಳಿಗೆ ನೀರು ಕುಡಿಸಿದ್ದಾರೆ. ಆದರೂ ಮಂಗಗಳು ಕೊನೆಯುಸಿರೆಳೆದಿವೆ.

ಅಪರಿಚಿತರು ಮಂಗಗಳನ್ನು ತಂದು ಎಸೆದಿದ್ದು, ತೋಟದ ಮಾಲೀಕರು ಮಂಗಗಳಿಗೆ ವಿಷ ಉಣಿಸಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.

Comments are closed.