ಕರಾವಳಿ

ರಾಜ್ಯ ಸಚಿವ ಯು.ಟಿ.ಖಾದರ್ ಸಚಿವ ಕೇಂದ್ರ ರಾಂವಿಲಾಸ್ ಪಾಸ್ವಾನ್ ಭೇಟಿ :ಪಡಿತರ ವಿತರಣೆ ವ್ಯವಸ್ಥೆ ಬಗ್ಗೆ ಚರ್ಚೆ

Pinterest LinkedIn Tumblr

ಮಂಗಳೂರು : ದೆಹಲಿಯಲ್ಲಿ ಗುರುವಾರ ನಡೆದ ವಿವಿಧ ರಾಜ್ಯಗಳ ಆಹಾರ ಸಚಿವರ ಸಭೆಯಲ್ಲಿ ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಾಂವಿಲಾಸ್ ಪಾಸ್ವಾನ್ ಅವರನ್ನು ಕರ್ನಾಟಕ ಆಹಾರ ಸಚಿವ ಯು.ಟಿ. ಖಾದರ್ ಅವರು ಭೇಟಿಯಾದರು.

ಈ ಸಂದರ್ಭದಲ್ಲಿ ಪಡಿತರ ವಿತರಣೆ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದ ಕೇಂದ್ರ ಸಚಿವರು ಕರ್ನಾಟಕದ ಪಡಿತರ ವಿತರಣೆ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರ ಯು.ಟಿ ಖಾದರ್ ಇವರ ಅನುದಾನ ಬಿಡುಗಡೆ

ಮ0ಗಳೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ಆಹಾರ ಸಚಿವ ಹಾಗೂ ಮಂಗಳೂರು ಶಾಸಕ ಯು.ಟಿ ಖಾದರ್ ಇವರ 2016-17ನೇ ಸಾಲಿನ ಅನುದಾನದಲ್ಲಿ ಮಂಜನಾಡಿ ಗ್ರಾಮಪಂಚಾಯತ್ ಮಂಜನಾಡಿ ಪಂಬದಹಿತ್ತಿಲು ಪೆರ್ಗಡೆ ಮೂಲಸ್ಥಾನದಲ್ಲಿ ದಾಸ್ತಾನು ಕೊಠಡಿ ಮತ್ತು ಚಾವಡಿ ನಿರ್ಮಾಣ(ಎಸ್.ಸಿ) ಕಾಮಗಾರಿಗೆ ರೂ. 5 ಲಕ್ಷ, ಮಂಜನಾಡಿ ಗ್ರಾಮದ ಮೊಂಟೆಪದವು ಎಸ್.ಸಿ. ಕಾಲನಿ ರಸ್ತೆ ಅಭಿವೃದ್ಧಿಗೆ ರೂ. 1.70 ಲಕ್ಷ, ಸೋಮೇಶ್ವರ ಗ್ರಾಮ ಪಂಚಾಯತ್ ಜಾರ ರಸ್ತೆಯ ಮುಂದುವರೆದ ಭಾಗ ಕಾಂಕ್ರಿಟೀಕರಣ ಕಾಮಗಾರಿಗೆ ರೂ. 2 ಲಕ್ಷ, ಕಿನ್ಯಾ ಗ್ರಾಮದ ಕುತುಬಿನಗರ 3ನೇ ಅಡ್ಡ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ರೂ. 3 ಲಕ್ಷ, ಸೋಮೇಶ್ವರ ಗ್ರಾಮ ಪಂಚಾಯತ್ ರಿಲಯನ್ಸ್ ಪಂಪಿನ ಎದುರು ಕುಂಡಕುಳಿ ರಸ್ತೆಗೆ ಹ್ಯೂಮ್ ಪೈಪು ಅಲವಡಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ರೂ. 5 ಲಕ್ಷ, ಸೋಮೇಶ್ವರ ಗ್ರಾಮ ಪಂಚಾಯತ್ ಕಜೆ ರಸ್ತೆ ಕಾಂಕ್ರಿಟೀಕರಣಕ್ಕೆ ರೂ. 5 ಲಕ್ಷ ಮಂಜೂರು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Comments are closed.