ಕರಾವಳಿ

ದುಷ್ಕರ್ಮಿಗಳಿಂದ ಮುಲ್ಕಿ ವ್ಯಾಪ್ತಿಯ ಮಸೀದಿಗಳಿಗೆ ಕಲ್ಲು ತೂರಾಟ

Pinterest LinkedIn Tumblr

ಮುಲ್ಕಿ, ಜನವರಿ.16 : ಮುಲ್ಕಿ ಠಾಣಾ ವ್ಯಾಪ್ತಿಯ ಪಡುಪಣಂಬೂರು ಸಮೀಪದ ಸಂತೆಕಟ್ಟೆ ಮಸೀದಿ ಹಾಗೂ ಮೂಲ್ಕಿ-ಕೆಎಸ್‌ರಾವ್ ನಗರದ ಮಸೀದಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಹಾನಿಯೆಸಗಿರುವ ಘಟನೆ ಬೆಳಕಿಗೆ ಬಂದಿದೆ.

ಹಳೆಯಂಗಡಿ ಸಂತೆಕಟ್ಟೆಯಲ್ಲಿರುವ ಪ್ರಾರ್ಥನಾ ಮಂದಿರ, ಮತ್ತು ಕೊಲ್ನಾಡು ಕೆ.ಎಸ್. ರಾವ್ ನಗರದ ಪ್ರಾರ್ಥನಾ ಮಂದಿರಕ್ಕೆ ಕಲ್ಲೆಸೆಯಲಾಗಿದೆ. ಇದರಿಂದ ಸಂತೆಕಟ್ಟೆ ಪ್ರಾರ್ಥನಾ ಮಂದಿರದ ಮುಂಭಾಗದ ಗಾಜು ಹಾಗೂ ಬಾಗಿಲಿನ ಗಾಜು ಪುಡಿಯಾಗಿದೆ.

2 ಬೈಕ್‌ಗಳಲ್ಲಿ ಬಂದಿದ್ದ ನಾಲ್ವರಿದ್ದ ತಂಡದಿಂದ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಈ ಸಂಬಂಧ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳೀಯ ಅಂಗಡಿಗಳಲ್ಲಿ ಅಳವಡಿಸಿರುವ ಸಿಸಿ ಕೆಮರಾ ಫುಟೇಜ್ ಪರಿಶೀಲಿಸಿದ್ದಾರೆ.

Comments are closed.