ಕರಾವಳಿ

ಮಂಗಳೂರಿನಲ್ಲಿ ದೇವಾಡಿಗ ವಧುವರರ ಸಮಾವೇಶ

Pinterest LinkedIn Tumblr

ಮಂಗಳೂರು,ಜನವರಿ. 16 :ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಆಶ್ರಯದಲ್ಲಿ “ದೇವಾಡಿಗ ವಧುವರರ ಸಮಾವೇಶ” ಬಾನುವಾರ ಮಣ್ಣಗುಡ್ಡ ಗಾಂಧೀನಗರದಲ್ಲಿರುವ ಸಮಾಜ ಭವನದಲ್ಲಿ ಜರಗಿತು.

ಕರ್ನಾಟಕ ರಾಜ್ಯ ದೇವಾಡಿಗ ಸಂಘದ ನಿಕಟಪೂರ್ವ ಅಧ್ಯಕ್ಷರಾದ ವಾಮನ್ ಮರೋಳಿ ಸಮಾವೇಶವನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷರಾದ ಡಾ. ದೇವರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವೇಣಿ ಮರೋಳಿ, ಕೋಶಾಧಿಕಾರಿ ಶ್ರೀಮತಿ ಗೀತಾ.ವಿ.ಕಲ್ಯಾಣ್‌ಪುರ್, ಜೊತೆ ಕಾರ್ಯದರ್ಶಿಗಳಾದ ಶಿವಾನಂದ ಮೊಯ್ಲಿ, ಸದಾಶಿವ ಎಂ.ಮೊಯ್ಲಿ, ಸಂಘಟನಾ ಕಾರ್ಯದರ್ಶಿಗಳಾದ ಭಾಸ್ಕರ್ ಇಡ್ಯಾ, ನಾಗೇಶ್ ದೇವಾಡಿಗ, ಮಹಿಳಾ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಮಮತ ಪದ್ಮನಾಭ ದೇವಾಡಿಗ, ಯುವ ಸಂಘಟನೆಯ ಅಧ್ಯಕ್ಷ ಉದಯ ಕುಮಾರ್ ಕಣ್ವತೀರ್ಥ, ಪಧಾಧಿಕಾರಿಗಳಾದ ಕರುಣಾಕರ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಸುಭಶ್ಚಂದ್ರ ಕಣ್ವತೀರ್ಥ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀನಿವಾಸ್‌ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Comments are closed.