ಉಡುಪಿ: ಸ್ಕೂಟರ್ ಗೆ ರಿಟ್ಜ್ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಉಡುಪಿ ತಾಲೂಕಿನ ಸಂತೇಕಟ್ಟೆ ಬಳಿಯ ಕೆ.ಜಿ.ರಸ್ತೆಯಲ್ಲಿ ನಡೆದಿದೆ.
ಅಮ್ಮುಂಜೆ ನಿವಾಸಿ ಅಪ್ಪುಚಾಲ ಬಂಗೇರಾ ಮೃತ ದುರ್ದೈವಿಯಾಗಿದ್ದು ಕೊಳಲಗಿರಿಯಲ್ಲಿ ಬೇಕರಿ ನಡೆಸುತ್ತಿದ್ದ ಅಪ್ಪು ಬಂಗೇರಾ ಅವರು ಕೊಳಲಗಿರಿಯಿಂದ ಸಂತೇಕಟ್ಟೆ ಕಡೆ ಬರುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಇವರ ಸ್ಕೂಟರಿಗೆ ಡಿಕ್ಕಿಯಾಗಿದೆ. ಮದ್ಯ ಸೇವಿಸಿ ಕಾರು ಚಾಲನೆಯಿಂದ ಅಪಘಾತ ನಡೆದಿದೆ ಎಂದು ಆರೋಪಿಸಲಾಗಿದೆ. ಕಾರಿನಲ್ಲಿದ್ದ ಮೂವರು ವಿದ್ಯಾರ್ಥಿಗಳು ಪಾರಾಗಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.