ಕರಾವಳಿ

ಮಂಗಳೂರಿನಿಂದ ದುಬೈಗೆ ಹೊರಟ ವಿಮಾನ ಮಸ್ಕತ್‌‌ನಲ್ಲಿ ತುರ್ತು ಭೂಸ್ಪರ್ಶ

Pinterest LinkedIn Tumblr

airindia_flight_maskat

ಮಂಗಳೂರು: ಡಿಸೆಂಬರ್ 30ರಂದು ರಾತ್ರಿ ಮಂಗಳೂರಿನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಶನಿವಾರ ಬೆಳಿಗ್ಗೆ ಮಸ್ಕತ್‌‌ನಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಬಗ್ಗೆ ವರದಿಯಾಗಿದೆ.

ಏರ್ ಇಂಡಿಯಾ ವಿಮಾನ ನಿನ್ನೆ ರಾತ್ರಿ 11:30ಕ್ಕೆ ಮಂಗಳೂರಿನಿಂದ ದುಬೈಗೆ ಹೊರಟಿತ್ತು. ಬೆಳಗ್ಗೆ ಮೋಡ ಕವಿದ ವಾತಾವರಣದಿಂದ ಅನಿವಾರ್ಯವಾಗಿ ಪಥ ಬದಲಿಸಿದ ವಿಮಾನ 9:30ಕ್ಕೆ ಮಸ್ಕತ್‌‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಎಲ್ಲರಿಗೂ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.