ಕರಾವಳಿ

ಮದನೀಸ್ ಅಸೋಸಿಯೇಶನ್ ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಖಾಝಿ ಇ.ಕೆ.ಇಬ್ರಾಹೀಂ ಮದನಿ ಕೃಷ್ಣಾಪುರ ಆಯ್ಕೆ

Pinterest LinkedIn Tumblr

ullala_madanis-president1

ಉಳ್ಳಾಲ : ಮದನೀಸ್ ಅಸೋಸಿಯೇಶನ್ ಕೇಂದ್ರ ಸಮಿತಿಯ 2016-19ನೇ ಸಾಲಿನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಉಳ್ಳಾಲ ಮದನಿ ಹಾಲ್‌ನಲ್ಲಿ ಕೃಷ್ಣಾಪುರ ಸಂಯುಕ್ತ ಜಮಾ‌ಅತ್ ಖಾಝಿ, ಇ.ಕೆ.ಇಬ್ರಾಹೀಂ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಯ್ಯಿದ್ ಅಬೂಬಕರ್ ಚೆರುಕುಂಞ್ಞಿ ತಂಙ್ಙಳ್ ದು‌ಆ ನೆರವೇರಿಸಿದರು. ಉಳ್ಳಾಲ ಸಯ್ಯಿದ್ ಮದನಿ ಶರೀ‌ಅತ್ ಕಾಲೇಜಿನ ಪ್ರೊಫೆಸರ್ ಅಹ್ಮದ್ ಬಾವ ಉಸ್ತಾದ್ ಸಭೆಯನ್ನು ಉದ್ಘಾಟಿಸಿದರು. ಸಯ್ಯಿದ್ ಮದನಿ ದರ್ಗಾ ಸಮಿತಿ ಉಪಾಧ್ಯಕ್ಷರಾದ ಹಾಜಿ ಬಾವ ಮುಹಮ್ಮದ್, ಯು.ಕೆ.ಮೋನು ಇಸ್ಮಾಯೀಲ್, ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಎ.ಕೆ.ಮೊದೀನ್, ವಳವೂರು ಇಸ್ಮಾಯೀಲ್ ಹಾಜೀ ಮೊದಲಾದವರು ಆಶಂಸ ಭಾಷಣಗೈದರು.

ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಖಾಝಿ ಇ.ಕೆ.ಇಬ್ರಾಹೀಂ ಮದನಿ ಕೃಷ್ಣಾಪುರ, ಉಪಾಧ್ಯಕ್ಷರುಗಳಾಗಿ ಸಯ್ಯಿದ್ ಇಸ್ಮಾಯೀಲ್ ತಂಙಳ್ ಮದನಿ ಉಜಿರೆ, ಸಯ್ಯಿದ್ ಅಬೂಬಕರ್ ಸಿದ್ದೀಖ್ ತಂಙಳ್ ಮದನಿ, ಅಲ್-ಹಾಜ್ ವಿ.ಎ.ಇಸ್ಮಾಯೀಲ್ ಮದನಿ ನೆಕ್ಕಿಲಾಡಿ, ಅಬ್ದುರ್ರಹ್ಮಾನ್ ಮದನಿ ಕಾಡಾಚಿರ ಕಣ್ಣೂರು ಪ್ರಧಾನ ಕಾರ್ಯದರ್ಶಿಯಾಗಿ ಎನ್.ಎ.ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಕಾರ್ಯದರ್ಶಿಗಳಾಗಿ ಕೆ.ಎಂ.ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ, ಆರ್. ಕೆ. ಮುಹಮ್ಮದ್ ರಫೀಖ್ ಮದನಿ ಅಮ್ಮೆಂಬಳ, ಅಬ್ಬಾಸ್ ಮದನಿ ಬಂಡಾಡಿ, ಕೆ. ಅಹ್ಮದ್ ಬಶೀರ್ ಮದನಿ ಕೂಳೂರು ಕೋಶಾಧಿಕಾರಿಯಾಗಿ ಅಬ್ದುರ್ರಝ್ಝಾಖ್ ಮದನಿ ಅಕ್ಕರಂಗಡಿ ಕ್ಷೇಮನಿಧಿ ಚಯರ್‌ಮ್ಯಾನ್ ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙ್ಙಳ್ ಕಾಜೂರು ಕನ್ವೀನರ್ ಪಿ.ಕೆ.ಮುಹಮ್ಮದ್ ಮದನಿ ಅಳಕೆ ಪ್ರಕಾಶನ ಸಮಿತಿ ಚಯರ್‌ಮಾನ್ ಬಂಡಾಡಿ ಅಬ್ಬಾಸ್ ಮದನಿ, ಕನ್ವೀನರ್ ಸಾಮಣಿಗೆ ಮುಹಮ್ಮದ್ ಮದನಿ, ಸದಸ್ಯರುಗಳಾಗಿ ಸಿ.ಟಿ.ಎಂ.ಉಮರ್ ಅಸ್ಸಖಾಫ್ ತಂಙ್ಙಳ್ ಮಂಶರ್, ಸಯ್ಯಿದ್ ಅಬ್ದುಸ್ಸಲಾಂ ಮದನಿ ತಂಙ್ಙಳ್ ಪುಂಜಾಲಕಟ್ಟೆ, ಕರಾಯ ಕಾಸಿಂ ಮದನಿ, ಪಿ.ಎಂ.ಮೂಸಲ್ ಮದನಿ ತಲಕ್ಕಿ, ಕೊಳಕೇರಿ ಉಸ್ಮಾನ್ ಮದನಿ, ಸಿ.ಕೆ.ಕುಂಞ್ಞಲನ್ ಮದನಿ ನೀಲಗಿರಿ, ಮರ್ಸಿನ್ ಮುಹಮ್ಮದ್ ಮದನಿ, ಅಬ್ದುರ್ರಶೀದ್ ಮದನಿ ಆಲಪ್ಪುಝ, ಯೂಸುಫ್ ಮದನಿ ಚೆರುವತ್ತೂರು, ಉಳ್ಳಾಲ ಮುಸ್ತಫಾ ಮದನಿ, ಖಾಸಿಂ ಮದನಿ ಬೊಳ್ಳಾಯಿ, ಅಬ್ದುಲ್ ಅಝೀಝ್ ಮದನಿ ಬಿಜಾಪುರ, ಅಬೂಬಕರ್ ಮದನಿ ಪರಪ್ಪು, ಅಕ್ಬರ್ ಅಲೀ ಮದನಿ ಆಲಂಪಾಡಿ, ಆದಂ ಮದನಿ ಆತೂರು, ಕೊಯ್ಯೂರು ಇಸ್ಮಾಯೀಲ್ ಮದನಿ, ಬೆನಪು ಅಬೂಬಕರ್ ಮದನಿ, ಹಂಝ ಮದನಿ ಚೆಂಬುಗುಡ್ಡೆ, ಅಬ್ದುರ್ರಝ್ಝಾಖ್ ಮದನಿ ಮಂಜನಾಡಿ, ಉಮರ್ ಮದನಿ ಮಚ್ಚಂಪಾಡಿ, ಮುಫತ್ತಿಶ್ ಅಬ್ದುಲ್ ಹಮೀದ್ ಮದನಿ ಬೊಳ್ಮಾರ್, ಉಮರ್ ಮದನಿ ಪೊಯ್ಯತ್ತಬೈಲ್, ಬಶೀರ್ ಮದನಿ ಮಡಿಕೇರಿ, ಇಸ್ಮಾಯೀಲ್ ಬುಖಾರಿ ಮದನಿ ನೂಜಿ, ಸಿನಾನ್ ಮದನಿ ಕಲ್ಲಡ್ಕ, ಅಲೀ ಮದನಿ ಸೆರ್ಕಳ ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿ ಜೆಪ್ಪು ಎನ್. ಎ. ಅಬ್ದುರ್ರಹ್ಮಾನ್ ಮದನಿ ಸ್ವಾಗತಿಸಿ ಕಾರ್ಯದರ್ಶಿ ಅಬ್ಬಾಸ್ ಮದನಿ ಬಂಡಾಡಿ ವಂದಿಸಿದರು. ಆರ್. ಕೆ. ಮದನಿ ಅಮ್ಮೆಂಬಳ ಕಾರ್ಯಕ್ರಮ ನಿರೂಪಿಸಿದರು.

Comments are closed.