ಕರಾವಳಿ

ಅಪರಿಚಿತ ವಾಹನ ಡಿಕ್ಕಿಯಾಗಿ ಐಟಿಐ ವಿದ್ಯಾರ್ಥಿ ದಾರುಣ ಸಾವು

Pinterest LinkedIn Tumblr

ಕುಂದಾಪುರ: ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ಬೈಕಿನ ಹಿಂಬದಿಯಲ್ಲಿದ್ದ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟ ಘಟನೆ ಕುಂದಾಪುರದಲ್ಲಿ ತಡರಾತ್ರಿ ನಡೆದಿದೆ. ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಮೂಡುಬಗೆ ಎಂಬಲ್ಲಿನ ನಿವಾಸಿಯಾದ ಶಂಭು ಶೆಟ್ಟಿ ಹಾಗೂ ಗಿರಿಜಾ ದಂಪತಿಗಳ ಪುತ್ರ ಸಂದೀಪ ಶೆಟ್ಟಿ(20) ಮೃತಪಟ್ಟ ವಿದ್ಯಾರ್ಥಿ.

kundapura_accident_student-death-5 kundapura_accident_student-death-4 kundapura_accident_student-death-2 kundapura_accident_student-death-3 kundapura_accident_student-death-1

ಸಂದೀಪ ಶೆಟ್ಟಿ ಕುಂದಾಪುರದ ಹಂಗಳೂರು ಎಂಬಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ ಕಾಲೇಜು) ದಲ್ಲಿ ಮೋಟಾರ್ ಮೆಕ್ಯಾನಿಕ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದರು. ಕೂಲಿಕೆಲಸ ಮಾಡಿಕೊಂಡಿದ್ದ ಶಂಭು ಶೆಟ್ಟಿಯವರಿಗೆ ತನ್ನ ವಿದ್ಯಾಭ್ಯಾಸ ಹೊರೆಯಾಗಬಾರದೆಂಬ ಕಾರಣಕ್ಕೆ ತನ್ನ ಖರ್ಚು ವೆಚ್ಚವನ್ನು ತಾನೇ ಸಂಪಾದಿಸುವ ಸಲುವಾಗಿ ಸಂದೀಪ್ ಕಳೆದ ಒಂದು ವರ್ಷದಿಂದ ಕುಂದಾಪುರದ ಪ್ರತಿಷ್ಟಿತ ಹೋಟೇಲೊಂದರಲ್ಲಿ ಸಪ್ಲೈಯರ್ (ವೇಟರ್) ಆಗಿ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೂ ಕಾಲೇಜಿನಲ್ಲಿರುವ ಈತ ಸಂಜೆಯ ಬಳಿಕ ನೇರ ಹೋಟೇಲ್ ಕೆಲಸಕ್ಕೆ ಹೋಗಿ ರಾತ್ರಿ 11.30 ರ ಬಳಿಕ ತನ್ನ ಚಿಕ್ಕಪ್ಪ ಚಂದ್ರ ಶೆಟ್ಟಿ ಹಾಗೂ ಅವರ ಮಗನಾದ ಪ್ರದೀಪ್ ಜೊತೆ ಅಂಪಾರುವಿನ ತನ್ನ ಮನಗೆ ತೆರಳುತ್ತಿದ್ದ. ಆದರೇ ಸೋಮವಾರ ರಾತ್ರಿ ಕೆಲಸ ಮುಗಿಸಿ ಬೈಕ್ ನಲ್ಲಿ ಇನ್ನೋರ್ವ ಸ್ನೇಹಿತನ ಜೊತೆ ತೆರಳುತ್ತಿರುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಹಿಂಬದಿಯಿಂದ ಬಂದ ವಾಹನವೊಂದು ಬೈಕಿಗೆ ಡಿಕ್ಕಿಯಾಗಿದ್ದು ಆಯತಪ್ಪಿ ರಸ್ತೆಗೆ ಬಿದ್ದ ಸಂದೀಪ್ ಎದೆಭಾಗದ ಮೇಲೆ ವಾಹನದ ಚಕ್ರ ಹರಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಸಂದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಸಂದೀಪ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು ಮನೆಗೆ ಶವವನ್ನು ರವಾನಿಸಲಾಗಿದೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.