ಕರಾವಳಿ

ಸಿದ್ದರಾಮಯ್ಯ ಆಧುನಿಕ ಟಿಪ್ಪು; ಸುನೀಲ್ ಕುಮಾರ್ ವ್ಯಂಗ್ಯ

Pinterest LinkedIn Tumblr

ಉಡುಪಿ: ಎಲ್ಲಾ ವಿರೋಧಗಳನ್ನು ಲೆಕ್ಕಿಸದೇ ಟಿಪ್ಪು ಜಯಂತಿ ಆಚರಣೆಗೆ ಹೊರಟ ಸಿ‌ಎಂ ಸಿದ್ದರಾಮಯ್ಯ ಆಧುನಿಕ ಕಾಲ ಟಿಪ್ಪು ಎಂದು ಕಾರ್ಕಳ ಶಾಸಕ, ವಿಪಕ್ಷದ ಮುಖ್ಯ ಸಚೇತಕ ಸುನೀಲ್ ಕುಮಾರ್ ಆಪಾದಿಸಿದ್ದಾರೆ.

udupi_bjp_protest-1 udupi_bjp_protest-2 udupi_bjp_protest-3 udupi_bjp_protest-4 udupi_bjp_protest-5 udupi_bjp_protest-6 udupi_bjp_protest-7 udupi_bjp_protest-8

ನ.10 ರಂದು ಸರಕಾರದ ವತಿಯಿಂದ ಆಚರಿಸಲಾಗುತ್ತಿರುವ ಟಿಪ್ಪು ಜಯಂತಿಯನ್ನು ಖಂಡಿಸಿ ಉಡುಪಿಯ ಕ್ಲಾಕ್ ಟವರ್ ಎದುರು ಬಿಜೆಪಿ ಜಿಲ್ಲಾ ಘಟಕದಿಂದ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸುನೀಲ್ ಕುಮಾರ್ ಅಂದು ಟಿಪ್ಪು ಸುಲ್ತಾನ್ ಕನ್ನಡ ವಿರೋಧಿಯಾಗಿ, ಹಿಂದೂ ವಿರೋಧಿಯಾಗಿ ಆಡಳಿತ ನಡೆಸಿದ್ದ. ಮತಾಂತರದ ಮೂಲಕ ಕೆಟ್ಟ ಆಡಳಿತ ನಡೆಸಿ ಅನೇಕರ ಪ್ರಾಣ ಹರಣಕ್ಕೆ ಕಾರಣವಾಗಿದ್ದ, ಇಂದು ರಾಜ್ಯದ ಸಿ‌ಎಂ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆಯ ವಿಚಾರದಲ್ಲಿ ವಿರೋಧ ವ್ಯಕ್ತವಾಗಿದ್ದರೂ, ಪ್ರಾಣ ಕಳೆದುಕೊಂಡಿದ್ದರೂ ಕೋಟ್ಯಾಂತರ ರೂ ಸರಕಾರಿ ಹಣವನ್ನು ಖರ್ಚು ಮಾಡಿ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದ್ದಾರೆ. ಸಿ‌ಎಂ ಸಿದ್ದರಾಮಯ್ಯ ಆಧುನಿಕ ಕಾಲದ ಟಿಪ್ಪು ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಭಾರತೀ ಮುದ್ದಮ್ಮ, ಮಾಜಿ ಶಾಸಕ ಲಾಲಾಜಿ ಮೆಂಡನ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments are closed.