ಕರಾವಳಿ

ಉಡುಪಿ ಭಾಸ್ಕರ್ ಶೆಟ್ಟಿ ಮರ್ಡರ್ ಕೇಸ್; ಸಿಐಡಿ ಅಧಿಕಾರಿಗಳಿಂದ ಚಾರ್ಜ್‌ಶೀಟ್ ಸಲ್ಲಿಕೆ

Pinterest LinkedIn Tumblr

bhaskar-shetty

ಉಡುಪಿ: ಇಲ್ಲಿನ ಬಹುಕೋಟಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

5 ಮಂದಿ ಆರೋಪಿಗಳ ವಿರುದ್ಧದ ಚಾರ್ಜ್‌ಶೀಟ್ ಸಲ್ಲಿಸಿದ್ದು ಪ್ರಥಮ ಆರೋಪಿಯಾಗಿ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರೀ ಶೆಟ್ಟಿ, 2 ನೇ ಆರೋಪಿ ಭಾಸ್ಕರ ಶೆಟ್ಟಿ ಪುತ್ರ ನವನೀತ್ ಶೆಟ್ಟಿ, 3ನೇ ಆರೋಪಿ ನಿರಂಜನ್ ಭಟ್, ನಾಲ್ಕನೇ ಆರೋಪಿ ಶ್ರೀನಿವಾಸ್ ಭಟ್ 5 ನೇ ಆರೋಪಿ ರಾಘವೇಂದ್ರ ಆಗಿದ್ದಾರೆ.

ಇದೇ ವರ್ಷದ ಜುಲೈ 28 ಕ್ಕೆ ನಡೆದಿದ್ದ ಕೊಲೆ ಪ್ರಕರಣ ಇದಾಗಿದ್ದು, 4 ವಾಲ್ಯುಮ್ ಗಳ ಅಂದಾಜು 1000ಕ್ಕೂ ಅಧಿಕ ಪುಟಗಳಷ್ಟಿರುವ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಸದ್ಯವೇ ಪತ್ರಿಕಾಗೋಷ್ಟಿ ನಡೆಯಲಿದ್ದು ಇನ್ನಷ್ಟು ವಿವರಗಳು ಲಭಿಸಲಿದೆ.

Comments are closed.