ಇಂದು ಬೆಳಿಗ್ಗೆ 4.30 ಕ್ಕೆ ಹಿರಿಯಡ್ಕ ಮಹತೋಭಾರ ಶ್ರೀ ವೀರಭಧ್ರಸ್ವಾಮಿ ದೇವಸ್ಥಾನದ ಸಂಪೂರ್ಣ ಜೀರ್ಣೋದ್ದಾರದ ಅಂಗವಾಗಿ “ರಾಜ ಗೋಪುರ” ಮತ್ತು “ನಗಾರಿ ಗೋಪುರ”ಗಳ ಶಿಲಾನ್ಯಾಸ ಸಮಾರಂಭವು ಷಡಂಗ ಲಕ್ಷ್ಮೀನಾರಾಯಣ ತಂತ್ರಿ ಇವರ ನೇತೃತ್ವದಲ್ಲಿ, ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ವಿನಯ ಕುಮಾರ್ ಸೊರಕೆ (ಎಂ.ಎಲ್.ಎ ಹಾಗು ಮಾಜಿ ಸಚಿವ), ಮುಖ್ಯ ಅತಿಥಿ ಶ್ರೀ ಬಿ. ಜಗನ್ನಾಥ ಶೆಟ್ಟಿ ಪುಣೆ, ದೇವಸ್ಥಾನದ ಆಡಳಿತ ಕುಟುಂಬದ ಆಳ್ವ ಹೆಗ್ಡೆ ಕುರ್ಲಾ ಹೆಗ್ಡೆ ಕುಟುಂಬಸ್ಥರು, ಮುಂಬಯಿ ಸಮಿತಿಯ ಅಧ್ಯಕ್ಷರಾದ ಸಿಎ ಏನ್.ಬಿ. ಶೆಟ್ಟಿ ಹಾಗು ಸಮಿತಿಯ ಸಲಹೆಗಾರ ಸದಸ್ಯರುಗಳಾದ ಶಿವರಾಮ ಶೆಟ್ಟಿ ಹೋಟೆಲ್ ಸತ್ಕಾರ್, ಮುದ್ರಾಡಿ ದಿವಾಕರ ಶೆಟ್ಟಿ ದಿವ್ಯ ಸಾಗರ್, ಸಿ. ಎಸ್ ಶೆಟ್ಟಿ ಥಾಣೆ, ದೇವಸ್ಥಾನದ ಅರ್ಚಕ ಮತ್ತು ನೌಕರ ವರ್ಗ ಇವರ ಉಪಸ್ಥಿತಿಯಲ್ಲಿ ನಡೆಯಿತು. ಊರ-ಪರಊರ ನೂರಾರು ಭಕ್ತಾಭಿಮಾನಿಗಳು ಮುಂಜಾನೆ 4 ರಿಂದಲೇ ಉಪಸ್ಥಿತರಿದ್ದದ್ದು ವಿಶೇಷವಾಗಿತ್ತು.
ಕರಾವಳಿ
Comments are closed.