ಕರಾವಳಿ

ಸಹಕೈದಿಗಳಿಗೆ ಹಲ್ಲೆ, ಬೆದರಿಕೆ ಹಿನ್ನೆಲೆ : ಮಂಗಳೂರು ಜೈಲಿನಿಂದ ಐವರು ಕೈದಿಗಳ ಸ್ಥಳಾಂತರ

Pinterest LinkedIn Tumblr

Jail_attach_police_2

ಮಂಗಳೂರು, ಅ.09 : ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಸಹಕೈದಿಗಳ ಮೇಲೆ ಹಲ್ಲೆ ನಡೆಸುತ್ತಿದ್ದ ಹಾಗೂ ಬೆದರಿಕೆ ಹಾಕುತ್ತಿದ್ದ ಐವರು ಕೈದಿಗಳನ್ನು ಮಂಗಳೂರು ಜೈಲಿನಿಂದ ಬೆಂಗಳೂರು ಜೈಲಿಗೆ ಸ್ಥಳಾಂತರಿಸಲಾಗಿದೆ.

ಮಂಗಳೂರು ಜೈಲಿನಿಂದ ಸ್ಥಳಾಂತರಗೊಂಡ ಕೈದಿಗಳನ್ನು ವಿವಿಧ ಪ್ರಕರಣಗಳ ಆರೋಪಿಗಳಾದ ಮುಹಮ್ಮದ್ ಸರ್ಫಾರ್ಜ್, ಇರ್ಷಾದ್, ವಿಜಯ್ ಮಂಕಿಸ್ಟ್ಯಾಂಡ್, ಸುಶೀಲ್ ಕುಮಾರ್, ಚರಣ್ ಶೇಟ್ ಎನ್ನಲಾಗಿದೆ.

ಈ ಕೈದಿಗಳ ಪೈಕಿ ಮುಹಮ್ಮದ್ ಸರ್ಫಾರ್ಜ್ ಮತ್ತು ಇರ್ಷಾದ್ ಇತ್ತೀಚೆಗೆ ಜೈಲಿನಲ್ಲಿ ಸಹಕೈದಿ ನೌಷಾದ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳಾಗಿದ್ದಾರೆ.

ಉಳಿದ ಆರೋಪಿಗಳು ಜೈಲಿನಲ್ಲಿ ಇತರ ಕೈದಿಗಳಿಗೆ ವಿವಿಧ ರೀತಿಯಲ್ಲಿ ಮಾನಸಿಕ ಹಿಂಸೆ ನೀಡುತ್ತಿದ್ದು, ಜೊತೆಗೆ ಬೆದರಿಕೆ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

Comments are closed.