
ಮಂಗಳೂರು, ಸೆಪ್ಟಂಬರ್,10 : ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಮಂಗಳೂರಿನ ಸಂಘನಿಕೇತನದಲ್ಲಿ ಪೂಜಿಸಲ್ಪಟ್ಟ ೬೯ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಬಹಳ ಸಂಭ್ರಮ ಸಡಗರೊಂದಿಗೆ ಶುಕ್ರವಾರ ಸಮಾಪನಗೊಂಡಿತ್ತು.
ಶುಕ್ರವಾರ ಸಂಜೆ ನಗರದ ಪ್ರತಾಪನಗರದಲ್ಲಿರುವ ಸಂಘನೀಕೇತನದದಿಂದ ಹೊರಟ ಶ್ರೀ ಗಣಪತಿ ದೇವರ ವೈಭವದ ಶೋಭಾಯಾತ್ರೆಯು ಮಣ್ಣಗುಡ್ಡ, ಗುರ್ಜಿ. ಆಳಕೆ,ನ್ಯೂಚಿತ್ರಾ ಮಾರ್ಗವಾಗಿ ಸಾಗಿ ರಥಭೀದಿಯಲ್ಲಿರುವ ಶ್ರೀ ಕುಡ್ತೇರಿ ಮಾಹಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ಸಂಪನ್ನಗೊಂಡಿತ್ತು.

ಆರ್ ಎಸ್ ಎಸ್ ಪ್ರಾಂತ ಸಂಘ ಚಾಲಕರಾದ ಡಾ| ವಾಮನ್ ಶೆಣೈ, .ಪ್ರವೀಣ್ ಕುಮಾರ್,ಜೆ.ಕೆ.ರಾವ್, ಕೆ.ಪದ್ಮನಾಭ, ಕ್ಯಾ|ಬ್ರಿಜೇಶ್ ಚೌಟ, ಜಗದೀಶ್ ವಿ.ಶೆಟ್ಟಿ ,ಸತೀಶ್ ಪ್ರಭು, ಸಂಜಯ ಪ್ರಭು, ಗುರುಚರಣ್, ಜಯ ಪ್ರಕಾಶ್ ,ಮೋಹನ್ ಆಚಾರ್, ಫ್ರಾಂಕ್ಲಿನ್ ಮೊಂತೆರೋ ಹಾಗೂ ಮತ್ತಿತ್ತರ ಆರ್ ಎಸ್ ಎಸ್ ಪ್ರಮುಖರು ಹಾಗೂ ಬಿಜೆಪಿಯ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
Comments are closed.