ಕರಾವಳಿ

ದ.ಕ.ಜಿಲ್ಲೆಗೆ ರೂ.60 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ತುರ್ತು ಕ್ರಮದ ಭರವಸೆ ನೀಡಿದ ಸಚಿವ ರಮೇಶ್ ಜಿಗಜಿಣಗಿ

Pinterest LinkedIn Tumblr

Minister_Jigajinagi_Bjp_1

ಮಂಗಳೂರು : ಕೇಂದ್ರ (ಕುಡಿಯುವ ನೀರು ಹಾಗೂ ನೈರ್ಮಲ್ಯ, ರಾಜ್ಯ ಖಾತೆ) ಸಚಿವ ಶ್ರೀ ರಮೇಶ್ ಜಿಗಜಿಣಗಿರವರು ಬುಧವಾರ ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಭಾರತೀಯ ಜನತಾ ಪಾರ್ಟಿ ಕಚೇರಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರಾರವರು ರೂ.60.00 ಕೋಟಿಯ ದ.ಕ.ಜಿಲ್ಲೆಗೆ ಕುಡಿಯುವ ನೀರಿನ ಬಗ್ಗೆ ಮನವಿ ಸಲ್ಲಿಸಿದರು. ಸಚಿವರು ಕೂಡಲೇ ಸ್ಪಂದಿಸಿ ತುರ್ತು ಕ್ರಮದ ಭರವಸೆ ನೀಡಿದರು.

Minister_Jigajinagi_Bjp_2 Minister_Jigajinagi_Bjp_3 Minister_Jigajinagi_Bjp_4 Minister_Jigajinagi_Bjp_5

ಪಕ್ಷದ ಜಿಲ್ಲಾ ಪ್ರಮುಖರಾದ ಕೆ.ಮೋನಪ್ಪ ಭಂಡಾರಿ, ರವಿಶಂಕರ್ ಮಿಜಾರ್, ಸಂಜಯ್ ಪ್ರಭು, ಕ್ಯಾ.ಬ್ರಿಜೇಶ್ ಚೌಟ, ವೇದವ್ಯಾಸ ಕಾಮತ್, ರವಿಚಂದ್ರ, ಸದಾನಂದ ನಾವುರ, ಗುರುಚರಣ್, ಸೂರಜ್ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

Comments are closed.