ಕರಾವಳಿ

ಸಚಿವ ಸೊರಕೆಗೆ ಸಂಪುಟದಲ್ಲಿ ಗೇಟ್ ಪಾಸ್; ಕಾಪುವಿನಲ್ಲಿ ಹಲವರು ಸಾಮೂಹಿಕ ರಾಜೀನಾಮೆ

Pinterest LinkedIn Tumblr

ಉಡುಪಿ: ರಾಜ್ಯ ಸಚಿವ ಸಂಪುಟದಲ್ಲಿ ನಗರಾಭಿವೃದ್ದಿ ಸಚಿವರಾಗಿದ್ದ ವಿನಯ್ ಕುಮಾರ್ ಸೊರಕೆ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟ ಹಿನ್ನಲೆಯಲ್ಲಿ ಸೊರಕೆ ಸ್ವ ಕ್ಷೇತ್ರದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

Sorake Koke_Udupi_Congress issue (2) Sorake Koke_Udupi_Congress issue (4) Sorake Koke_Udupi_Congress issue (1) Sorake Koke_Udupi_Congress issue (3)

ಭಾನುವಾರ ಸಂಜೆ ಕಾಪು ಬ್ಲಾಕ್ ಕಾಂಗ್ರೆಸ್ ಸಭೆಯನ್ನ ನಡೆಸಿಲಾಗಿದ್ದು ಕಾಪು ಪುರಸಭೆಯ ಅದ್ಯಕ್ಷ, ಉಪಾದ್ಯಕ್ಷ ಸೇರಿ 11 ಸದಸ್ಯರು, ತಾ.ಪಂ ಹಾಗೂ ಜಿಲ್ಲಾಪಂಚಾಯತ್ ಸದಸ್ಯರು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ. ಮಾತ್ರವಲ್ಲ ಕಾಪು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ನವೀನ್ ಚಂದ್ರಶೆಟ್ಟಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬ್ಲಾಕ್ ಪದಾಧಿಕಾರಿಗಳೂ ರಾಜೀನಾಮೆ ಸಲ್ಲಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ತಮ್ಮ ರಾಜಿನಾಮೆಯನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ನೀಡುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

Comments are closed.