
ಮಂಗಳೂರು,ಜೂನ್.13: ದ.ಕ.ಜಿಲ್ಲೆಯಲ್ಲಿ ಮಳೆ ಆರಂಭಗೊಂಡಿದ್ದು, ನಗರದ ಹಲವೆಡೆಗಳಲ್ಲಿ ಚರಂಡಿ ಸಮಸೈಗಳಿಂದ ಸರಾಗವಾಗಿ ನೀರು ಹರಿದಾಡಲು ಸಾಧ್ಯವಾಗದೇ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ.
ನಗರದ ಕುಲಶೇಖರ ಪದಮಿತ್ತ್ ಎಂಬಲ್ಲಿ ಚರಂಡಿಯಲ್ಲಿ ಹೂಳುತುಂಬಿ ಈ ಬಾರಿಯ ಮಳೆಗೆ ತೋಡಿನಲ್ಲಿ ನೀರು ಸರಾಗವಾಗಿ ಹರಿದಾಡಲು ಆಡಚಣೆಯುಂಟಾಗಿದೆ. ಕಸಕಡ್ಡಿಗಳೊಂದಿಗೆ ನೀರು ಅಲ್ಲೇ ಶೇಖರಣೆಗೊಂಡು ದುರ್ವಾವಾಸನೆ ಬೀರುತ್ತಿರುವುದರಿಂದ ಸ್ಥಳೀಯರು ಮೂಗುಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಈ ರೀತಿ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತಿ ಹೆಚ್ಚುತ್ತಿರುವುದರಿಂದ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುವುದರಿಂದ ಸ್ಥಳೀಯ ನಿವಾಸಿಗಳು ಭಯಬೀತರಾಗಿದ್ದಾರೆ.

ಈ ಬಗ್ಗೆ ಸ್ಥಳೀಯ ಕಾರ್ಪೋರೇಟರ್ ಹಾಗೂ ಮನಪಾ ಮೇಯರ್ ಹರಿನಾಥ್ ಅವರಿಗೆ ಈಗಾಗಲೇ ಲಿಖಿತ ಮನವಿ ನೀಡಲಾಗಿದ್ದು, ಆದರೆ ಇವರು ಯಾರು ಈ ಸಮಸೈ ಪರಿಹರಿಸುವ ಬಗ್ಗೆ ಉತ್ಸಾಹ ತೋರದೇ ಇರುವುದರಿಂದ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯ ಮುಖಂಡರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
Comments are closed.