ಕರಾವಳಿ

ಅನುಪಮಾ ಶೆಣೈ ರಾಜೀನಾಮೆ ವಿಚಾರವಾಗಿ ಉಡುಪಿಯಲ್ಲಿ ಪೇಜಾವರ ಶ್ರೀ ಹೇಳಿದ್ದೇನು ಗೊತ್ತಾ?

Pinterest LinkedIn Tumblr

ಉಡುಪಿ: ಕೂಡ್ಲಗಿ ಡಿವೈ ಎಸ್ಪಿ ಅನುಪಮಾ ಶೆಣೈ ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರೀಯೆ ನೀಡಿದ ಉಡುಪಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶೀಪಾದರು ಅನುಪಮಾ ದಕ್ಷ ಪೊಲೀಸ್ ಅಧಿಕಾರಿ ಅಂತವರು ರಾಜೀನಾಮೆ ನೀಡಬಾರದು, ರಾಜೀನಾಮೆ ಹಿಂಪಡೆಯುವ ಬಗ್ಗೆ ಪ್ರಯತ್ನಗಳು ನಡೆಯಬೇಕು ಎಂದರು.

pejavara-sree_facebook

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಈ ಬಗ್ಗೆ ಪ್ರತಿಕ್ರೀಯಿಸಿದ ಪೇಜಾವರ ಶ್ರೀಗಳು ರಾಜೀನಾಮೆ ವಿಚಾರವಾಗಿ ಅದರ ಹಿನ್ನಲೆಗಳು ನನಗೆ ಗೊತ್ತಿಲ್ಲ. ಆದರೆ ದಕ್ಷ ಅಧಿಕಾರಿಯಾಗಿರುವ ಅನುಪಮಾ ಆ ಸ್ಥಾನದಲ್ಲಿರಬೇಕು. ರಾಜ್ಯಕ್ಕೆ ಅನುಪಮಾ ಅಂತವರು ಬೇಕು. ಅನುಪಮಾ ಶೆಣೈ ಅವರಿಗೆ ಏನು ತೊಂದರೆ ಆಗಿದೆ ಎಂದು ಅವರಲ್ಲಿ ಮಾತುಕತೆ ನಡೆಸಿ ಅವರ ಮನ‌ಒಲಿಸುವ ಮೂಲಕ ಅದೇ ಹುದ್ದೆಯಲ್ಲಿ ಮುಂದುವರೆಯುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

Comments are closed.