ಉಡುಪಿ: ಕೂಡ್ಲಗಿ ಡಿವೈ ಎಸ್ಪಿ ಅನುಪಮಾ ಶೆಣೈ ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರೀಯೆ ನೀಡಿದ ಉಡುಪಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶೀಪಾದರು ಅನುಪಮಾ ದಕ್ಷ ಪೊಲೀಸ್ ಅಧಿಕಾರಿ ಅಂತವರು ರಾಜೀನಾಮೆ ನೀಡಬಾರದು, ರಾಜೀನಾಮೆ ಹಿಂಪಡೆಯುವ ಬಗ್ಗೆ ಪ್ರಯತ್ನಗಳು ನಡೆಯಬೇಕು ಎಂದರು.
ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಈ ಬಗ್ಗೆ ಪ್ರತಿಕ್ರೀಯಿಸಿದ ಪೇಜಾವರ ಶ್ರೀಗಳು ರಾಜೀನಾಮೆ ವಿಚಾರವಾಗಿ ಅದರ ಹಿನ್ನಲೆಗಳು ನನಗೆ ಗೊತ್ತಿಲ್ಲ. ಆದರೆ ದಕ್ಷ ಅಧಿಕಾರಿಯಾಗಿರುವ ಅನುಪಮಾ ಆ ಸ್ಥಾನದಲ್ಲಿರಬೇಕು. ರಾಜ್ಯಕ್ಕೆ ಅನುಪಮಾ ಅಂತವರು ಬೇಕು. ಅನುಪಮಾ ಶೆಣೈ ಅವರಿಗೆ ಏನು ತೊಂದರೆ ಆಗಿದೆ ಎಂದು ಅವರಲ್ಲಿ ಮಾತುಕತೆ ನಡೆಸಿ ಅವರ ಮನಒಲಿಸುವ ಮೂಲಕ ಅದೇ ಹುದ್ದೆಯಲ್ಲಿ ಮುಂದುವರೆಯುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
Comments are closed.