ದುಬೈ: ಕನ್ನಡಿಗರು ದುಬೈ ಬಳಗದ ಆಶ್ರಯದಲ್ಲಿ ಮೇ 6 ರಂದು ರಕ್ತದಾನ ಹಾಗೂ ಆರೋಗ್ಯ ತಪಾಸಣೆ ಶಿಬಿರವನ್ನು ದುಬೈಯ ಸ್ಟೆಡಿಯಂ ಮೆಟ್ರೊ ಸ್ಟೆಷನ್ ಪಕ್ಕದಲ್ಲಿರುವ ತುಂಬೆ ಅಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು.
ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ ನಡೆದ ರಕ್ತದಾನ ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕನ್ನಡಿಗರು ದುಬೈ ಬಳಗದ ಉಮಾ ವಿಧ್ಯಾದರ್, ಸಾದನ್ ದಾಸ್, ಮಲ್ಲಿಕಾರ್ಜುನ ಗೌಡ, ದೀಪಕ್ ಸೊಮಶೇಖರ್, ಬಾಲ ಸಾಲ್ಯಾನ್ , ಸುರೇಖಾ ವಿ ಬಾಬು, ಶಿವಕೂಮರ್, ನಟರಾಜ್, ಡಾ.ಮೋಹನ್ ಕುದ್ರು, ಮಲ್ಲಿಕಾರ್ಜುನಅಂಗಡಿ, ಭರತ್, ಬಾಲಾಜಿ, ಬಾಲು, ಚಂದ್ರಕಾಂತ್, ಚಂದ್ರಶೇಖರ್, ಶ್ರೀನಿವಾಸ್, ವಿನಿತ್, ಮಮತ, ಅನಿತ ಹಾಜರಿದ್ದರು.