ಕರಾವಳಿ

ಶಾರ್ಜಾ ಕರ್ನಾಟಕ ಸಂಘದ 2016ನೆ ಸಾಲಿನ ಅಧ್ಯಕ್ಷರಾಗಿ ಸುಗಂಧರಾಜ್ ಬೇಕಲ್ ಸರ್ವಾನುಮತದಿಂದ ಆಯ್ಕೆ

Pinterest LinkedIn Tumblr

Sugandharaj bekal

ದುಬೈ: ಶಾರ್ಜಾ ಕರ್ನಾಟಕ ಸಂಘದ 2016ನೆ ಸಾಲಿನ ನೂತನ ಅಧ್ಯಕ್ಷರಾಗಿ ಸುಗಂಧರಾಜ್ ಬೇಕಲ್ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಫೋರ್ಚುನ್ ಪ್ಲಾಝಾ ಹೊಟೇಲಿನ ಸಭಾಂಗಣದಲ್ಲಿ ಮಾರ್ಚ್ 20ರಂದು ನಡೆದ ಶಾರ್ಜಾ ಕರ್ನಾಟಕ ಸಂಘದ ಮಹಾಸಭೆಯಲ್ಲಿ 2016ನೆ ಸಾಲಿನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಉಪಾಧ್ಯಕ್ಷರು: ಎಂ.ಇ.ಮೂಳೂರು, ವಸಂತ ಬೇಕಲ್
ಪ್ರಧಾನ ಕಾರ್ಯದರ್ಶಿ: ಅಬ್ದುಲ್ ರಝಾಕ್
ಸಹಕಾರ್ಯದರ್ಶಿ: ದಿನೇಶ್ ಆಚಾರ್ಯ, ನಿತ್ಯಾನಂದ ಭಂಡಾರಿ
ಖಜಾಂಚಿ: ಶಶಿಕಾಂತ ಕಾನಂಗಿ
ಸಹಖಜಾಂಚಿ: ಆನಂದ ಬೈಲೂರು, ಯಾದವ್ ಕೋಟ್ಯಾನ್
ಸಾಂಸ್ಕೃತಿಕ ಕಾರ್ಯದರ್ಶಿ: ವಿಶ್ವನಾಥ ಶೆಟ್ಟಿ
ಸಾಂಸ್ಕೃತಿಕ ಸಹ ಕಾರ್ಯದರ್ಶಿ: ಸಂದೀಪ್ ರಾವ್
ಕ್ರೀಡಾ ಕಾರ್ಯದರ್ಶಿ: ರಾಜೇಶ್ ಕುತ್ತಾರ್
ಕ್ರೀಡಾ ಸಹಕಾರ್ಯದರ್ಶಿ: ಜೀವನ್ ಕುಕ್ಯಾನ್
ಸಾರ್ವಜನಿಕ ಸಂಪರ್ಕ: ಅನಂತ ರಾಮನ್, ಈರಣ್ಣ ಮೂಲಿಮನಿ

ಕರ್ನಾಟಕ ಸಂಘ ಶಾರ್ಜಾದ ಸಲಹೆಗಾರರಾಗಿ ಜವಬ್ದಾರಿಯನ್ನು ವಹಿಸಿಕೊಂಡ ಗಣ್ಯರು
ಕರ್ನಾಟಕ ಸಂಘ ಶಾರ್ಜಾದ ಸಲಹೆಗಾರರಾಗಿ ಸ್ಥಾಪನೆಯಾದ ವರ್ಷದಿಂದ ಇಲ್ಲಿಯವರೆಗೆ ಸೇವೆ ಸಲ್ಲಿಸಿರುವ ಅಧ್ಯಕ್ಷರಾದ ಬಿ.ಕೆ.ಗಣೇಶ್ ರೈ, ಪ್ರಭಾಕರ ಅಂಬಲತೆರೆ, ನೋವೆಲ್ ಡಿ.ಅಲ್ಮೆಡಾ, ಸತೀಶ್ ಪೂಜಾರಿ, ಶಾಂತಾರಾಮ್ ಆಚಾರ್, ಸತೀಶ್ ವೆಂಕಟರಮಣ ಹಾಗೂ ಮಯೂರ ಪ್ರಶಸ್ತಿ ಪುರಸ್ಕೃತರಾದ ಪ್ರವೀಣ್ ಕುಮಾರ್ ಶೆಟ್ಟಿ, ಹರೀಶ್ ಶೇರಿಗಾರ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಅನಂತ್‌ರವರಿಂದ ಸ್ವಾಗತ, ಅಧ್ಯಕ್ಷರಾದ ಸತೀಶ್ ವೆಂಕಟರಮಣರಿಂದ ಅಭಿನಂದನಾ ಸಲ್ಲಿಕೆ ಹಾಗೂ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆಯನ್ನು ಪೋಷಕರಾದ ಮಾರ್ಕ್ ಡೆನ್ನಿಸ್ ಡಿಸೋಜಾ ಮತ್ತು ಪ್ರಭಾಕರ ಅಂಬಲತೆರೆ ನೆರವೇರಿಸಿಕೊಟ್ಟರು.

Write A Comment