ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇದರ ರೋವರ್ಸ್ ರೇಂಜರ್ಸ್ ಘಟಕದ ವತಿಯಿಂದ ಉಡುಪಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಪರಿಸರ ಸ್ವಚ್ಛತೆ ಬಗ್ಗೆ ಕರಪತ್ರದ ಮೂಲಕ ಜಾಗ್ರತಿ ಅಭಿಯಾನ 18-3-2016 ರಂದು ನಡೆಯಿತು. ಅಭಿಯಾನಕ್ಕೆ ರೈಲ್ವೇ ಇಲಾಖೆಯ ಶಾಲಿನಿ ಚಾಲನೆ ನೀಡಿದರು. ರೋವರ್ ಸ್ಕೌಟ್ ಲೀಡರ್ ಗಣೇಶ್ ನಾಯಕ್, ಮುಂತಾದವರು ಉಪಸ್ಥಿತರಿದ್ದರು.