ಬುಧವಾರ ಬೈಂದೂರಿನ ಜ್ಯೂನಿಯರ್ ಕಾಲೇಜಿನ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಹೇನಬೇರು ನಿವಾಸಿ ಬಾಬು ದೇವಾಡಿಗ ಎಂಬುವರ ಪುತ್ರಿ ಅಕ್ಷತಾ ದೇವಾಡಿಗ(17) ಎಂಬಾಕೆಯೇ ನಿಗೂಢವಾಗಿ ಸಾವನ್ನಪ್ಪಿದವಳು. ಬೈಂದೂರು ಕಾಲೇಜಿನ ವಿದ್ಯಾರ್ಥಿನಿಯಾದ ಅಕ್ಷತಾ ದೇವಾಡಿಗ ಕಾಲೇಜು ಮುಗಿಸಿ ಮನೆಯಾದ ಹೇನ್ ಬೇರಿಗೆ ಕಾಲು ದಾಯಿಯಲ್ಲಿ ಹೋಗುವಾಗ ಈ ಘಟನೆ ಸಂಭವಿಸಿದೆ.
ಅಕ್ಷತಾ ಸಾವಿಗೆ ಸ್ವಷ್ಟ ಕಾರಣ ಹುಡುಕಿ, ಸೂಕ್ತ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಶಿಕ್ಷೆ ನೀಡಬೇಕು. ಹಾಗೆಯೇ ಅಕ್ಷತಾ ಸಾವಿಗೆ ಸರಿಯಾದ ನ್ಯಾಯ ದೊರಕಿಸಿ ಕೊಡಬೇಕು ಹಾಗೆಯೇ ಎಲ್ಲಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಸರಿಯಾದ ರಕ್ಷಣೆ ಒದಗಿಸಬೇಕು ಎಂದು ಬೈಂದೂರು ಕಾಲೇಜಿನ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.
ಶಿರೂರಿನಲ್ಲಿ ನಡೆದ ರತ್ನಾ ಕೊಠಾರಿಯ ಸಾವಿನ ರೀತಿಯಲ್ಲಿಯೇ ಈ ಕೊಲೆಯೂ ನಡೆದಿರಬಹುದೇ ಎನ್ನುವ ಶಂಕೆಯೂ ಈಗ ಎಲ್ಲೆಡೆ ವ್ಯಕ್ತವಾಗುತ್ತಿದ್ದು, ಆಕೆಯ ಮೃತ ದೇಹವೂ ಹೀಗೇ ಕಾಲು ದಾರಿಯ ಸಮೀಪದ ಪೊದೆಯೊಮದರಲ್ಲಿ ಪತ್ತೆಯಾಗಿತ್ತು. ಆದರೆ ಆಕೆಯ ಮೃತ ದೇಹ ದೊರೆಯುವಾಗ ಸಂಪೂರ್ಣ ಕೊಳೆತು ಹೋಗಿದ್ದರಿಂದ ಸಾವಿನ ಹಿಂದಿನ ಕಾರಣ ದೊರೆತಿಲ್ಲ ಎಂದು ಪೊಲೀಸರು ತಿಳಿಸಿ ಕೈತೊಳೆದುಕೊಂಡಿದ್ದರು. ಇದೀಗ ಅದೇ ರೀತಿಯಲ್ಲಿ ಮತ್ತೊಬ್ಬ ವಿದ್ಯಾರ್ಥಿನಿಯ ಸಾವು ನಡೆದಿದ್ದು ಸಾವಿನ ಹಿಂದಿನ ಸತ್ಯವನ್ನು ಬೆಧಿಸಿ ಸಾವಿಗೀಡಾದ ಅಕ್ಷತಾಳಿಗೆ ಹಾಗೂ ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಸಾರ್ವಜನಿಕರು, ಗ್ರಾಮಸ್ಥರು ಆಗ್ರಹಿಸಿದರು.
ಹಾಗೇಯೆ ಎಲ್ಲಾ ಅಂಗಡಿಗಳನ್ನು ಮುಂಗಟ್ಟುಗಳನ್ನು ಮುಚ್ಚಿ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು. ಸಾರ್ವಜನಿಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.