ಕರಾವಳಿ

ವಿಚ್ಛೇದಿತ ಹೆಂಡತಿಯಿಂದ ಗಂಡನ ಅಪಹರಣ : ಎರಡನೇ ಹೆಂಡತಿಯಿಂದ ದೂರು

Pinterest LinkedIn Tumblr

KND_DEC.17_11

ಕುಂದಾಪುರ: ಹದಿನಾರು ವರ್ಷಗಳ ಹಿಂದೆ ಮದುವೆಯಾಗಿದ್ದ ವಿಚ್ಛೇದಿತ ಹೆಂಡತಿ ಹಾಗೂ ಆಕೆಯ ಮಗ ಬಲಾತ್ಕಾರವಾಗಿ ತನ್ನ ಗಂಡನನ್ನು ಕಾರಿನಲ್ಲಿ ಅಪಹರಿಸಿದ್ದಾರೆ ಎಂದು ಎರಡನೇ ಹೆಂಡತಿ ಪೊಲೀಸರಿಗೆ ದೂರು ನೀಡಿದ ಘಟನೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಡಿ.12ರಂದು ನಡೆದಿದೆ. ಖಲೀಲ್ ನೂರ್ ಮೊಹಮ್ಮದ್ ಎಂಬುವರೇ ಅಪಹರಣಕ್ಕೊಳಗಾದವರು.

ಘಟನೆಯ ವಿವರ: ಕುಂದಾಪುರ ತಾಲೂಕಿನ ಯೆಡ್ತೆರೆ ಗ್ರಾಮದ ಖಲೀಲ್ ನೂರ್ ಮೊಹಮ್ಮದ್ ಎಂಬಾತ ಸುಮಾರು ಹದಿನಾರು ವರ್ಷಗಳ ಹಿಂದೆ ಬೆಂಗಳೂರಿನ ಶಾಹಿದಾ ಪರ್ವಿನ್ ಎಂಬಾಕೆಯನ್ನು ವಿವಾಹವಾಗಿದ್ದು, ಓರ್ವ ಮಗನನ್ನು ಪಡೆದಿದ್ದರು. ನಂತರ ಆಕೆಗೆ ವಿವಾಹ ವಿಚ್ಛೇದನ ನೀಡಿ ಬೈಂದೂರಿನ ಜಾಹಿದಾ ಎಂಬಾಕೆಯೊಂದಿಗೆ ವಿವಾಹ ಮಾಡಿಕೊಂಡಿದ್ದನು. ಆಕೆಗೂ 5 ವರ್ಷದ ಮಗನಿದ್ದು, ವಾಋದ ಹಿಂದೆ ಖಲೀಲ್ ಮೊಹಮ್ಮದ್ ಜಾಹಿದಾ ಮನೆಗೆ ಬಂದಿದ್ದು, ಡಿ.11ರಂದು ಮಧ್ಯಾಹ್ನ ಒಂದು ಗಂಟೆಗೆ ಹೆಚ್.ಎಂ.ಎಂ.ಎಸ್ ಶಾಲೆಗೆ ಹೋಗುವ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದಾಗ ಕೆ.ಎ. 04 – ಎಂ.ಪಿ.2716 ನೋಂದಣಿಯ ಕಡು ನೀಲಿ ಬಣ್ಣದ ಸ್ವಿಪ್ಟ್ ಕಾರಿನಲ್ಲಿ ಬಂದಿದ್ದ ಮೊದಲ ವಿಚ್ಛೇದಿತ ಪತ್ನಿ ಹಾಗೂ ಆಕೆಯ ಮಗ ಮತ್ತು ಇತರ ನಾಲ್ವರು ಖಲೀಲ್ ಮೊಹಮ್ಮದ್‌ನನ್ನು ಬಲಾತ್ಕಾರವಾಗಿ ಕಾರಿನಲ್ಲಿ ಕುಳ್ಳಿರಿಸಿ ಬೆಂಗಳೂರಿನಲ್ಲಿ ಆತನ ಮೇಲೆ ಪ್ರಕರಣ ದಾಖಲಾಗಿದ್ದು ಬರುವಂತೆ ಒತ್ತಾಯ ಪೂರ್ವಕ ಕರೆದೊಯ್ದಿದ್ದಾರೆ. ಈ ಬಗ್ಗೆ ಬೆಂಗಳೂರಿನ ಕೆ.ಜಿಹಳ್ಳಿ ಪೊಲೀಸ್ ಠಾಣೆ ಹಾಗೂ ಅಲ್ಲಿರುವ ಸಂಬಂಧಿಕರ ಜೊತೆ ಕೇಳಿದಾಗ ಅಲ್ಲಿಗೆ ಬಂದಿಲ್ಲವೆಂಬ ಉತ್ತರ ದೊರಕಿದ್ದು, ಪೊಲೀಸರು ಕರೆತಂದಿಲ್ಲ ಎನ್ನುವ ಮಾಹಿತಿ ಲಭಿಸಿದ್ದು, ತನ್ನ ಗಂಡನನ್ನು ಅಪಹರಿಸಲಾಗಿದೆ ಎಂದು ಜಾಹಿದಾ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Write A Comment