ಕುಂದಾಪುರ: ಇಲ್ಲಿನ ಕುಂದೇಶ್ವರದ ದೇವಸ್ಥಾನದ ಲಕ್ಷ ದೀಪೋತ್ಸವ ಮತ್ತು ರಥೋತ್ಸವ ಕಾರ್ಯಕ್ರಮ ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದರು. ದೇವಸ್ಥಾನದ ಒಳಭಾಗದಲ್ಲಿ ಮತ್ತು ಹೊರ ಆವರಣದಲ ಉದ್ದಕ್ಕೂ ದೀಪ ಹಚ್ಚಿ ಭಕ್ತರು ಸಂಭ್ರಮಿಸಿದರು.ಸಂಜೆಯಿಂದ ಆರಂಭಗೊಂಡ ಉತ್ಸವ ಬೆಳಗ್ಗಿನವರೆಗೂ ಮುಂದುವರೆಯುವುದು ಇಲ್ಲಿನ ವಿಶೇಷ. ಶನಿವಾರವೂ ಜಾತ್ರೆಯ ಗೌಜಿ ಮುಂದುವರಿದಿದೆ.
ಜಾತ್ರೆಯ ನಿಮಿತ್ತ ಕುಂದಾಪುರ ಪೇಟೆಯು ವಿಧ್ಯುತ್ ದಿಪಗಳಿಂದ ಅಲಂಕ್ರಥಗೊಂಡಿತ್ತು .ದೇವಸ್ಥಾನದ ವಠಾರದಲ್ಲಿ ನಡೆದ ಭಜನಾ ಕಾರ್ಯಕ್ರಮ ನ್ರತ್ಯ ರೂಪಕ ಎಲ್ಲರ ಮನಸೆಳೆಯಿತು.
ತದನಂತರ ರಂಗಪೂಜೆ,ಮಹಾಮಂಗಳಾರತಿ,ಲಕ್ಷದೀಪೋತ್ಸವ ಬಳಿಕ ರಾತ್ರಿ ಸೂಮಾರು ೧೦.೩೦ ಕ್ಕೆ ಶ್ರೀ ದೇವರ ಮೂರ್ತಿಯನ್ನು ಪುಷ್ಪಾಲಂಕ್ರಥ ರಥದಲ್ಲಿ ಮೆರವಣಿಗೆ ಮಾಡಲಾಯಿತು.ರಾತ್ರಿ ಪುಷ್ಫಾಲಂಕ್ರತ ರಥದಲ್ಲಿ ಕಟ್ಟೆ ಪೂಜೆಗಾಗಿ ಹೊರಡುವ ಉತ್ಸವ ಮೂರ್ತಿ ಕುಂದಾಪುರ ಪೇಟೆ ಸಂಚರಿಸಿ ಬೊಬ್ಬರ್ಯನಕಟ್ಟೆ, ಹಂಗಳೂರು ಭಾಗಕ್ಕೆ ತಲುಪಿ ಸುಮಾರು ೨೦ ಕ್ಕೂ ಹೆಚ್ಚು ಕಟ್ಟೆ ಪೂಜೆಯಲ್ಲಿ ಪಾಲ್ಘೊಂಡು ದೇವಾಲಯಕ್ಕೆ ಮರಳುವಾಗ ಬೆಳಗ್ಗಿನ ಜಾವವಾಗಿರುತ್ತದೆ.
ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ದೊಳ್ಳು ಕೂಣಿತ, ಚಂಡೆ ವಾದನ,ಕೀಲು ಕುದುರೆಗಳು, ತಟ್ಟಿರಾಯ,ಕೊಂಬು ಕಹಳೆಗಳ ವಾದನವಿತ್ತು.
ಜಾತ್ರೆಯ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದ ಸಾಂಸ್ಕ್ರತಿಕ ಮನೋರಂಜನಾ ಕಾರ್ಯಕ್ರಮಗಳು ಮತ್ತು ಸುಡುಮದ್ದು ಪ್ರದರ್ಶನಗಳು ಜನರನ್ನು ಆಕರ್ಷಿಸಿದವು.