ಉಳ್ಳಾಲ,ನ.14 : ಉಳ್ಳಾಲ ಚೆಂಬುಗುಡ್ಡೆ ಸಮೀಪ ಮನೆಯಲ್ಲೇ ಬೃಹತ್ ಕಸಾಯಿಖಾನೆಗೆ ದಾಳಿ ನಡೆಸಿದ್ದ ಉಳ್ಳಾಲ ಪೊಲೀಸರು 15 ಜಾನುವಾರು ಸಹಿತ ಕ್ವಿಂಟಾಲ್ಗಟ್ಟಲೇ ಕಡಿದು ಹಾಕಿದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಚೆಂಬುಗುಡ್ಡೆ ನಿವಾಸಿಯಾದ ಎಂ.ಸಿ ಬಾವ ಅವರ ಮನೆಯ ಕಸಾಯಿಖಾನೆಗೆ ಉಳ್ಳಾಲ ಕ್ರೈಂ ಎಸ್.ಐ ರಾಜೇಂದ್ರ ನೇತೃತ್ವದಲ್ಲಿ ದಾಳಿ ನಡೆಸಿ ಕಡಿದುಹಾಕಿದ ಜಾನುವಾರುಗಳ ಮಾಂಸದ ತುಂಡು, ಅರೆ ಜೀವಂತ ಸ್ಥಿತಿಯಲ್ಲಿದ್ದ ಕರು ಹಾಗೂ 15ಕ್ಕೂ ಹೆಚ್ಚು ಜಾನುವಾರುಗಳು ಅಂಗಳದಲ್ಲಿ ಕಟ್ಟಿ ಹಾಕಲಾಗಿದ್ದನ್ನು ಪತ್ತೆ ಹಚ್ಚಲಾಗಿದೆ. ಅರೋಪಿಯು ಘಟನಾ ಸ್ಥಳದಿಂದ ಪೊಲೀಸರ ದಾಳಿಯ ಮೊದಲೇ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.