ಮಂಗಳೂರು: ಡಿಸೆಂಬರ್ 12ರಿಂದ 14ರ ವರೆಗೆ ಅಡ್ಯಾರ್ನ ಸಹ್ಯಾದ್ರಿ ಕಾಲೇಜ್ ಆವರಣದಲ್ಲಿ ನಡೆಯುವ ವಿಶ್ವತುಳುವೆರೆ ಪರ್ಬದ ಅಂಗವಾಗಿ ಗುರುವಾರ ಬೆಳಗ್ಗೆ ದೊಂಪ ಮುಹೂರ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಹ್ಯಾದ್ರಿಯ ಅಡ್ಯಾರ್ ಕಾಲೇಜ್ ಆವರಣದಲ್ಲಿ ನಡೆದ ದೊಂಪ ಮುಹೂರ್ತ ಕಾರ್ಯಕ್ರಮದಲ್ಲಿ ಭಂಡಾರಿ ಬಿಲ್ಡರ್ಸ್ನ ಮಾಲಕ ಲಕ್ಷ್ಮೀಶ ಭಂಡಾರಿಯವರು ಮಹೂರ್ತ ಕಂಬ ಏರಿಸಿದರು. ಬೋಳಾರ ಮಾರಿಯಮ್ಮ ಮಹಿಷ ಮರ್ದಿನಿ ದೇವಸ್ಥಾನದ ಮೊಕ್ತೇಸರ ಎ.ಸೀತಾರಾಮ್, ದಾಸ್ ಪ್ರಮೋಟರ್ಸ್ನ ಮಾಲಕ ಅನಿಲ್ದಾಸ್ ಮುಖ್ಯಅಥಿತಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಶ್ವ ತುಳುವೆರೆ ಪರ್ಬದ ಪ್ರಧಾನ ಸಂಚಾಲಕ ಕದ್ರಿ ನವನೀತ್ ಶೆಟ್ಟಿ ಪ್ರಸ್ತಾವನೆ ಗೈದರು. ದೊಂಪ ಮಹೂರ್ತದ ವಿಶೇಷತೆ ಬಗ್ಗೆ ಪ್ರದೀಪ್ ಕಲ್ಕೂರ ಮಾಹಿತಿ ನೀಡಿದರು. ಜಿ.ಕೆ. ಎರೆಂಜರ್ಸ್ ಮೂಡಬಿದ್ರೆಯ ಗಣೇಶ್ ಕಾಮತ್ರಿಗೆ ಗೌರವ ವೀಳ್ಯವನ್ನು ತುಳುಕೂಟದ ಅಡ್ಯಾರು ಮಹಾಬಲ ಶೆಟ್ಟಿ ಮತ್ತು ಪ್ರದೀಪ್ಕುಮಾರ್ ಶೆಟ್ಟಿ ಅಡ್ಯಾರು ನೀಡಿದರು.
ಸಮಾರಂಭದಲ್ಲಿ ಪದಾಧಿಕಾರಿಗಳಾದ ಎ.ಸಿ.ಭಂಡಾರಿ, ದಾಮೋದರ ನಿಸರ್ಗ, ಕರಣಾಕರ ಶೆಟ್ಟಿ, ಜಯಲಕ್ಷ್ಮಿ ಹೆಗ್ಡೆ, ಅಡ್ಯಾರು ದಿವಾಕರ ಶೆಟ್ಟಿ, ಪ್ರದೀಪ್ ಆಳ್ವಾ, ಲೀಲಾಕ್ಷ ಕರ್ಕೇರ, ಸಾಹುಲ್ ಹಮೀದ್, ಚಂದ್ರಶೇಖರ ಸುವರ್ಣ, ವಿ.ಜಿ.ಪಾಲ್, ಜಯಶೀಲ ಅಡ್ಯಂತಾಯ, ವಿಜಯಲಕ್ಷ್ಮಿ ಶೆಟ್ಟಿ, ಮೆಲ್ವಿನ್ ಡಿಸೋಜಾ, ಲ್ಯಾನ್ಸಿ ಡಿಸೋಜಾ, ಅಡ್ಯಾರು ಮಾಧವ ನಾಯ್ಕ, ಶೇಖಬ್ಬ , ಪಿ.ಎ.ಪೂಜಾರಿ ಉಪಸ್ಥಿತರಿದ್ದರು. ಬೋಳಾರ ತಾರಾನಾಥ ಶೆಟ್ಟಿ ವಂದಿಸಿದರು. ಪುರುಷೋತ್ತಮ ಅಡ್ಯಾರು ಕಾರ್ಯಕ್ರಮ ನಿರ್ವಹಿಸಿದರು.