ಕರಾವಳಿ

ನ. 15 : ಸುಬ್ರಹ್ಮಣಿಯನ್ ಸ್ವಾಮಿ ಮಂಗಳೂರಿಗೆ ಭೇಟಿ – ಭ್ರಷ್ಟಾಚಾರ ಮತ್ತು ಭಯೋತ್ಪಾಧನೆ ವಿರುದ್ಧ ಹೋರಾಟ ಕುರಿತು ಉಪನ್ಯಾಸ

Pinterest LinkedIn Tumblr

Dr. subrahmanya_swami_2

ಮಂಗಳೂರು : ದೇಶದ ಅತಿ ದೊಡ್ಡ ಹಗರಣಗಳನ್ನು ಬಯಲಿಗೆಳೆದ ಮತ್ತು ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನವಾದ ಹಿರಿಯ ಭಾಜಪಾ ನಾಯಕ ಡಾ . ಸುಬ್ರಹ್ಮಣಿಯನ್ ಸ್ವಾಮಿಯವರು ಭ್ರಷ್ಟಾಚಾರದ ವಿರೋಧಿ ಜಾಗೃತಿಗಾಗಿ ದೇಶದ್ಯಂತ ಪ್ರವಾಸದಲ್ಲಿ ತೊಡಗಿದ್ದು, ದಿನಾಂಕ 15-11-2014 ರ ಶನಿವಾರದಂದು ಮಂಗಳೂರಿಗೆ ಭೇಟಿ ನೀದಲಿದ್ದಾರೆ. ಅವರು ಉಪನ್ಯಾಸವನ್ನು ನೀಡಲಿದ್ದಾರೆ.

ಅಂದು ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಮಂಗಳೂರಿನ ಸಂಘನಿಕೇತನದಲ್ಲಿ ಮಂಗಳೂರಿನ ‘ಸಿಟಿಜನ್ಸ್ ಕೌನ್ಸಿಲ್’ ಆಯೋಜಿಸಿರುವ ಕಾರ್ಯಕ್ರಮದಲ್ಲಿ “war against curreption and terrarism” ಎಂಬ ವಿಷಯದ ಕುರಿತು ಡಾ. ಸುಬ್ರಹ್ಮಣಿಯನ್ ಸ್ವಾಮಿಯವರು ಉಪನ್ಯಾಸವನ್ನು ನೀಡಲಿದ್ದಾರೆ.

dr_subramanya_swami_1

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ಣಾಟಕ ಬ್ಯಾಂಕ್ ಲಿಮಿಡೆಡ್‌ನ ಅಧ್ಯಕ್ಷರಾದ ಶ್ರೀ ಅನಂತಕೃಷ್ಣ ಅವರು ವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

Write A Comment